ಧಾರವಾಡ Prajakiran.com exclusive : ಕೆಎಂಎಫ್ ಅಧೀನದಲ್ಲಿ ಬರುವ ಧಾರವಾಡ ಹಾಲು ಒಕ್ಕೂಟದ ಹಾಲಿನ ಪುಡಿ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ.
ಇದರಿಂದಾಗಿ ಕೋಟ್ಯಾಂತರ ರೂಪಾಯಿ ಹಾನಿ ಸಂಭವಿಸಿದೆ.
ಆದರೆ ಅದಕ್ಕೆ ಈವರೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ಕುರಿತು ಮೇಲಾಧಿಕಾರಿಗಳು ತನಿಖೆ ನಡೆಸಿದ ಬಳಿಕವಷ್ಟೇ ಹಾನಿಯ ಸ್ಪಷ್ಟ ಮಾಹಿತಿ ದೊರೆಯಲಿದೆ.
ಈ ಕುರಿತು ಪ್ರಜಾಕಿರಣ.ಕಾಮ್ ದೊಂದಿಗೆ ಮಾತನಾಡಿದ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದೆ. ಹಾಲಿನ ಘಟಕಕ್ಕೆ ಬೆಂಕಿ ತಗುಲಿದ್ದು, ಅದರ ಹಾನಿಯ ವಿವರ ಈವರೆಗೆ ತಿಳಿದಿಲ್ಲ ಎಂದು ಜವಾಬ್ದಾರಿಯಿಂದ ನುಣುಚಿಕೊಂಡರು.
ಈ ಕುರಿತು ದೂರು ಯಾಕೆ ದಾಖಲಿಸಿಲ್ಲ ಎಂದು ಕೇಳಿದರೆ, ಹಿರಿಯ ಅಧಿಕಾರಿಗಳ ತಂಡ ಬಂದು ಪರಿಶೀಲಿಸಿ ಅದನ್ನು ವರದಿ ನೀಡಲಿದೆ ಎಂದು ತಿಳಿಸಿದರು.
ಧಾರವಾಡ ಅಗ್ನಿಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಧಾರವಾಡ ಹಾಲು ಒಕ್ಕೂಟದ ಹಾಲಿನ ಪುಡಿ ಘಟಕಕ್ಕೆ ಬೆಂಕಿ ತಗುಲಿ ಎರಡು ದಿನಗಳು ಕಳೆದರೂ ಈ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿರುವುದು ಯಾಕೆ,
ಈ ಕುರಿತು ಯಾವುದೇ ರೀತಿಯ ತನಿಖೆ ನಡೆಸದಿರುವುದು ಹಾಗೂ ದೂರು ದಾಖಲಿಸದಿರುವುದು ಅನುಮಾನ ಮೂಡಿಸಿರುವುದು ಸುಳ್ಳಲ್ಲ.
ಈ ಬಗ್ಗೆ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಿಗೆ ಕೂಡ ಸ್ಪಷ್ಟವಾದ ಮಾಹಿತಿ ಕೊರತೆ ಇದೆ ಎನ್ನಲಾಗಿದೆ.