ಬೆಂಗಳೂರು prajakiran.com : ಮಾಜಿ ಸಚಿವ ರೋಶನ್ ಬೇಗ್ ಅವರ ಶಿವಾಜಿ ನಗರದ ನಿವಾಸ ಹಾಗೂ ಬೂಪಸಂದ್ರದಲ್ಲಿರುವ ಅವರ ಮಗಳ ನಿವಾಸಕ್ಕೆ ಇಡಿ ಅಧಿಕಾರಿಗಳ ತಂಡ ಎಕಕಾಲಕ್ಕೆ ದಾಳಿ ನಡೆಸಿದೆ.
ಐ ಎಂಎ ಜುವ್ಯೆಲರ್ಸ್ ಮಾಲೀಕ ಮನ್ಸೂರ್ ಅಹ್ಮದ್ ಖಾನ್ ಜೊತೆಗೆ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸಿದ ಆರೋಪ, ಮಗನ ಮದುವೆ ಖರ್ಚು ಹಾಗೂ ಅಪಾರ ಪ್ರಮಾಣದ ಬಂಗಾರ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಸಿ ಆರ್ ಎಫ್ ಪೊಲೀಸ್ ಭದ್ರತಾ ಪಡೆಯ ಬಂದೋಬಸ್ತ್ ನಲ್ಲಿ ದೆಹಲಿಯಿಂದ ಆಗಮಿಸಿದ ನಾಲ್ಕು ಜನ ಅಧಿಕಾರಿಗಳ ತಂಡ ಏಕಕಾಲಕ್ಕೆ ಹಲವು ಕಡೆ ದಾಳಿ ನಡೆಸಿ ಪರಿಶೀಲನೆ ಕಾರ್ಯ ಕೈಗೊಂಡಿದೆ.
ಮಾಜಿ ಸಚಿವ ರೋಶನ್ ಬೇಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ತುದಿಗಾಲಮೇಲೆ ನಿಂತಿದ್ದರು.
ಆದರೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡದ ಹಿನ್ನೆಲೆಯಲ್ಲಿ ತಡೆ ಬಿದ್ದಿತ್ತು.
ಐಎಂ ಎ ಜುವ್ಯೆಲರ್ಸ್ ಮಾಲೀಕ ಮನ್ಸೂರ್ ಅಹ್ಮದ್ ಖಾನ್ ಸಾವಿರಾರು ಜನರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದಲ್ಲಿ ಮಾಜಿ ಸಚಿವ ರೋಶನ್ ಬೇಗ್ ಹಾಗೂ ಜಮೀರ್ ಅಹ್ಮದ್ ಖಾನ್ ಹೆಸರು ಕೇಳಿಬಂದಿದ್ದವು.
ಅಲ್ಲದೆ, ಮನ್ಸೂರ್ ಅಹ್ಮದ್ ಖಾನ್ ಕೂಡ ಇವರ ವಿರುದ್ದ ಸಾಕಷ್ಟು ಮಾಹಿತಿಯನ್ನು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದ