ಧಾರವಾಡ prajakiran.com :
ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಧಾರವಾಡದ ಜಯನಗರದ ವೃತ್ತ ದ ಹತ್ತಿರ ಕಾಂಗ್ರೆಸ್ ನಿಂದ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ರಸ್ತೆ ಬೀದಿಯಲ್ಲಿ ಗ್ಯಾಸ್ ಸಿಲಿಂಡರ್, ಬೈಕ್ ಕಾರುಗಳನ್ನು ಇಟ್ಟು ಅವುಗಳಿಗೆ ಹೂವಿನ ಹಾರ ಹಾಕಿ ಶೃದ್ಧಾಂಜಲಿ ಸಲ್ಲಿಸುವ ಮುಖಾಂತರ
ಕೇಂದ್ರದ ಬೆಲೆಯೇರಿಕೆಯನ್ನು ಖಂಡಿಸಿದರು.
ಕೇಂದ್ರ ಸರಕಾರವು ಸ್ವಲ್ಪ ದಿನ ಅಡುಗೆ ಸಿಲಿಂಡರ್ ಗಳ ಮೇಲೆ ಸಬ್ಸಿಡಿ ಹಣ ಕೊಟ್ಟಂತೆ ಮಾಡಿ ಇತ್ತೀಚೆಗೆ ಅದನ್ನು ಸಂಪೂರ್ಣವಾಗಿ
ನಿಲ್ಲಿಸಲಾಗಿದೆ.
ಇದನ್ನು ಹಗಲು ದರೋಡೆ ಎನ್ನದೇ ವಿಧಿ ಇಲ್ಲ. ನಾಗರಿಕರ ಮೂಲ
ಸೌಕರ್ಯಗಳನ್ನು ಸರಕಾರವು ದುಬಾರಿಯಾಗದಂತೆ
ನೋಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಘೋಷಣೆಗಳ
ಮೂಲಕ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ,ಎಚ್. ನೀರಲಕೇರಿ, ನಾಗರಾಜ ಗೌರಿ,
ಆನಂದ ಸಿಂಗನಾಥ, ವಸಂತ ಅರ್ಕಾಚಾರ, ಇಮ್ರಾನ್ ಕಳ್ಳಿಮನಿ, ದೇವಾನಂದ್ ರತ್ನಾಕರ, ಜಯಂತ ಸಾಗರ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯೆಲ್ಲಿ ಭಾಗವಹಿಸಿದ್ದರು.