ಬೆಂಗಳೂರು prajakiran.com : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ನವದೆಹಲಿಗೆ ಪ್ರವಾಸ ಬೆಳೆಸಿ, ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರೆ.
ಈ ಭೇಟಿ ರಾಜ್ಯರಾಜಕಾರಣದಲ್ಲಿ ಭಾರಿ ಕುತೂಹಲ ಉಂಟು ಮಾಡಿದೆ.
ಈ ಕುರಿತು ಮಾತನಾಡಿರುವ ಸಿಎಂ ಯಡಿಯೂರಪ್ಪ, ಪ್ರಧಾನಿ ಭೇಟಿಯಾಗುತ್ತೇನೆ.
ರಾಜ್ಯದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಲಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳ ಕುರಿತು ಕೇಂದ್ರ ಸಚಿವರಿಗೆ ಹಾಗೂ ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿ. ಅಭಿವೃದ್ಧಿ ಯೋಜನೆಗಲಿಗೆ ಅನುಮತಿ ಪೆಡೆಯುತ್ತೇನೆ.
ಇಂದು ದೆಹಲಿಗೆ ಭೇಟಿ ನೀಡಿ ನಾಳೆ ಬೆಂಗಳೂರಿಗೆ ವಾಪಾಸ್ ಆಗುತ್ತೇನೆ ಎಂದು ಹೇಳಿದ್ದಾರೆ.
ಸಿಎಂ ಬದಲಾವಣೆ ಕೂಗು ಬಲಗೊಂಡಿರುವ ಬೆನ್ನ ಹಿಂದೆಯೇ ಅವರ ಭೇಟಿ ಮಹತ್ವ ಪಡೆದಿದೆ.
ಅಲ್ಲದೆ, ವಿವಾದದ ನಂತರ ಇದು ಮೊದಲ ಭೇಟಿಯಾಗಿದ್ದು, ಈಗಾಗಲೇ ಅರುಣ ಸಿಂಗ್ ಬಂದು ಹೋಗಿರುವುದು ಇಲ್ಲಿ ಸ್ಮರಿಸಬಹುದು