ಮೈಸೂರು prajakiran.com : ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಪ್ಲೈಯರ್ ಮೇಲೆ ಹಲ್ಲೆಗೆ ಸಂಭಂದಿಸಿದಂತೆ ಹೋಟೆಲ್ಗೆ ಭೇಟಿ ನೀಡಿ ಪೋಲಿಸರು ತನಿಕೆ ನಡೆಸಿದ್ದಾರೆ.
ನಿನ್ನೆ ನಟ, ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ನ ದಲಿತ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ. ಸಪ್ಲೈಯರ್ ಕಣ್ಣಿಗೆ ಗಂಭೀರ ಗಾಯಗಳಾಗಿವೆ ಎಂದು ಅರೋಪ ಮಾಡಿದ್ದರು.
ಇದರ ಬೆನ್ನಲ್ಲೇ ಹೋಟೆಲ್ ಮಾಲಿಕ ಸಂದೇಶ್ ನಾಗರಾಜ್ ಪುತ್ರ, ಘಟನೆ ನಡೆದಿರುವುದು ನಿಜ.
ಆದರೆ ದರ್ಶನ್ ಹಲ್ಲೆ ಮಾಡಿಲ್ಲ ಬೈದಿದ್ದರು ಅಷ್ಟೇ ಎಂದು ಹೇಳಿಕೆ ನೀಡಿದ್ದರು.
ನಂತರ ನಟ ದರ್ಶನ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿ, ಬೈದಿದ್ದೇನೆ ಅಷ್ಟೇ ಯಾವುದೇ ಹಲ್ಕೆ ನಡೆಸಿಲ್ಲ. ಇದರ ಕುರಿತು ತನಿಕೆ ನಡೆಯಲಿ ಎಂದು ಹೇಳಿದ್ದರು.
ಇನ್ನೂ ಈ ಪ್ರಕರಣದ ಕುರಿತು ತನಿಕೆ ಮುಂದುವರೆದಿದ್ದು, ಇಂದು ಮೈಸೂರು ಪೋಲಿಸ್ ಅಧಿಕಾರಿಗಳು ಹೋಟೆಲ್ ಸಂದೇಶ್ ಪ್ರಿನ್ಸ್ಗೆ ಭೇಟಿ ನೀಡಿ, ಸಿಸಿಟಿವಿ ಧೃಶ್ಯ ಪರಿಶೀಲನೆ ನಡೆಸಿದ್ದಾರೆ.
ಹಾಗೂ ಹೇಳಿಕೆಗಳನ್ನು ವಿಡಿಯೋ ಹಾಗೂ ಬರಹದ ಮೂಲಕ ದಾಖಲಿಸಿಕೊಳ್ಳುತ್ತಿದ್ದಾರೆ.