ಬೆಂಗಳೂರು prajakiran.com : ನಾಡಿನ ಪ್ರತಿಷ್ಟಿತ ಚಾನಲ್ ಗಳಲ್ಲಿ ಒಂದಾದ ಪವರ್ ಟಿವಿ ಮೇಲೆ ಪ್ರತಿಕಾರದ ದಾಳಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರಅವರ ಕ್ರಮ ನೆನೆದು ನಿರೂಪಕ ರೆಹಮಾನ್ ಹಾಸನ ಕಣ್ಣೀರಿಟ್ಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಚಾನೆಲ್ ನಂಬಿಕೊಂಡು ರಾಜ್ಯದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳು ಬದುಕುಕಟ್ಟಿಕೊಳ್ಳುತ್ತಿವೆ. ಅವರ ಬದುಕು ಬೀದಿಗೆ ಬಂದಿದೆ ಎಂದು ಬಿಕ್ಕಿ ಬಿಕ್ಕಿ ಅತ್ತ ವೀಡಿಯೋ ಇದಾಗಿದೆ.
ನಾಡಿನ ದೊರೆಯ ಕುಟುಂಬದ ಭ್ರಷ್ಟಾಚಾರವನ್ನು ದಾಖಲೆ ಸಮೇತ ಹೊರಹಾಕಿದ್ದು ತಪ್ಪೇ ಎಂದು ಅವರು ಪ್ರಶ್ನಿಸಿದ್ದಾರೆ.
ಆ ವರದಿಯ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸದೆ ಏಕಾಏಕಿ ಪವರ ಟಿ ವಿ ಬಂದ ಮಾಡಿಸುವ ಮೂಲಕ ಸರ್ಕಾರ ತನ್ನೆಲ್ಲ ಶಕ್ತಿ ಮತ್ತು ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಅಸಮಾಧಾನ ಹೊರ ಹಾಕಿದರು.
ಆ ಮೂಲಕ ಪವರ ಟಿ ವಿ ಯಲ್ಲಿ ಕೆಲಸ ಮಾಡುತ್ತಿದ್ದ 250 ಕುಟುಂಬಗಳನ್ನು ಬೀದಿಗೆ ತಳ್ಳಿದೆ. ಇದು ಪತ್ರಿಕಾರಂಗದ ಮೇಲಿನ ಸರ್ಕಾರದ ದಮನಕಾರಿ ನೀತಿಯನ್ನು ತೋರಿಸುತ್ತದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಬಿಜೆಪಿ ಸರಕಾರದ ನಡೆ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಎಲ್ಲಾ ಮಾಧ್ಯಮ ಸಂಸ್ಥೆಗಳು ಈ ಬಗ್ಗೆ ಮೌನ ವಹಿಸಿ ಜಾಣಕುರುಡುತನ ತೋರಿಸುತ್ತಿರುವುದು ಎಕೆ ಎಂದು ಜನ ಪ್ರಶ್ನಿಸುವಂತಾಗಿದೆ.