ಧಾರವಾಡ prajakiran.com : 545 ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣ ಬಗೆದಷ್ಟು ಆಳ ಎಂಬಂತೆ ಆಗಿದೆ.
ಇದಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಗುರುವಾರ ಮತ್ತೆ ಮೂವರನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಅದರಲ್ಲಿ ಒಬ್ಬರನ್ನು ಧಾರವಾಡದಲ್ಲಿ ಬಂಧಿಸಲಾಗಿದೆ.
ಬಂಧಿತರನ್ನು ಪಿ ಎಸ್ ಐ ಅಕ್ರಮ ನೇಮಕಾತಿ ಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಆರನೇ ರ್ಯಾಂಕ್ ಬಂದಿದ್ದ ಲಕ್ಕಪ್ಪ,
57 ರ್ಯಾಂಕ್ ಬಂದಿದ್ದ ನಾನ್ ಕರ್ನಾಟಕದ ಧಾರವಾಡದ ಶ್ರೀಶೈಲ ಬಿರಾದಾರ ಹಾಗೂ 63ನೇ ರ್ಯಾಂಕ್ ಬಂದಿದ್ದ ಶ್ರೀಮಂತ ಸತ್ತಾಪುರ ಬಿರಾದಾರ ಎಂದು ಗೊತ್ತಾಗಿದೆ.
ಇವರು ಬಂಧಿತ ಪ್ರಮುಖ ಆರೋಪಿ ಆರ್. ಡಿ ಪಾಟೀಲ ಜೊತೆಗೆ ನಂಟು ಹೊಂದಿದ್ದರು.
ಅಲ್ಲದೆ, ಪರೀಕ್ಷೆಯಲ್ಲಿ ಬ್ಲೂ ಟೂತ್ ಬಳಸಿದ್ದ ಆರೋಪ ಎದುರಿಸುತ್ತಿದ್ದಾರೆ.
ಲಕ್ಜಪ್ಪ ತುಮಕೂರು ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದರೆ, ಶ್ರೀಶೈಲ ಬಿರಾದರ ಧಾರವಾಡ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಬರೆದಿದ್ದ ಎನ್ನಲಾಗಿದೆ.
ಅದೇ ರೀತಿ ಶ್ರೀಮಂತ ಸಪ್ತಾಪುರ ಬೆಂಗಳೂರು ರಾಮಮೂರ್ತಿ ನಗರದಲ್ಲಿ ಪರೀಕ್ಷೆ ಬರೆದಿದ್ದ ಎಂದು ತಿಳಿದುಬಂದಿದೆ.
ಮೂವರ ವಿರುದ್ದ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ್ ನೇತೃತ್ವದ ತಂಡ ಪ್ರತ್ಯೇಕವಾಗಿ ಆಯಾ ಜಿಲ್ಲೆಯಲ್ಲಿ ಪ್ರಕರಣ ದಾಖಲು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.