ಬಿಳಿಗಿರಿ ಶ್ರೀನಿವಾಸ
ಚಾಮರಾಜನಗರ prajakiran.com : ಕೊರೊನಾ ತೊಲಗಲಿ ಎಂದು ಕೋಳಿ ಬಲಿ ನೀಡಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಕೊರೋನಾ ಹೆಮ್ಮಾರಿ ತೊಲಗಲಿ ಅಂತಾ ಬಲಿಯನ್ನು ನೀಡಲಾಗಿದೆ.
ರಸ್ತೆಯಲ್ಲಿ ತಂಬಿಟ್ಟಿನ ಪೂಜೆ ಮಾಡಿ ಬಲಿ ನೀಡಿದರು.
ಅದರಲ್ಲೂ ಮಾರಮ್ಮನಿಗೆ ಬಲಿ ಕೊಡುವ ರೀತಿ ರಸ್ತೆಯಲ್ಲಿ ಪೂಜೆ ಮಾಡಿ, ಧೂಪ ಹಾಕಿದರು.
ಮತ್ತೇ ಮೌಢ್ಯದ ಮೊರೆ ಹೋದ ಜನ,
ಕಳೆದ 8 ದಿನದಿಂದ ರಾತ್ರಿ ವೇಳೆ ಪೂಜೆ ಸಲ್ಲಿಸಿದ್ದಾರೆ.
ಎಂಟನೇ ದಿನದ ಪೂಜೆಗೆ ಎಂಟು ಕೋಳಿ ಬಲಿ ನೀಡಲಾಗಿದೆ.
ಮಾರಮ್ಮ ಕೊರೋನಾ ತೊಲಗಿಸು ಅಂತಾ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯದ ಹಲವು ಕಡೆ ವಿವಿಧ ದೇವರರಿಗೆ ಪೂಜೆ ಸಲ್ಲಿಸಿ ಕೊರೊನಾ ದೇಶದಿಂದ ಓಡಿಸು ಎಂದು ಪ್ರಾರ್ಥನೆ ಮಾಡಿರುವ ವರದಿಯಾಗಿದೆ.