ಬೆಂಗಳೂರು prajakiran.com : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ದ ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ಅಧಿಕಾರಿಗಳ ತಂಡ ದಾಖಲಿಸಿಕೊಂಡಿದೆ.
ನಿನ್ನೆಯಷ್ಟೇ ಬೆಂಗಳೂರು ಸಿಬಿಐ ಕಚೇರಿಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಅದರ ಬೆನ್ನಲ್ಲೇ ಸೋಮವಾರ ಸಿಬಿಐ ಅಧಿಕಾರಿಗಳ ತಂಡ ಮುಂಬೈನ ಒಂದು ಕಡೆ, ನವದೆಹಲಿಯ ಸಂಸದ ಡಿ.ಕೆ.ಸುರೇಶ್ ಅವರ ಕಾವೇರಿ ಅಪಾರ್ಟಮೆಂಟ್ ನ ನಿವಾಸ, ಕಚೇರಿ, ಮನೆ ಸೇರಿ ನಾಲ್ಕು ಕಡೆ ಹಾಗೂ ರಾಜ್ಯದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕನಕಪುರದ ದೊಡ್ಡಆಲಹಳ್ಳಿ ಸೇರಿ ಒಂಬತ್ತು ಕಡೆ ಒಟ್ಟು 15ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ.
ಡಿಕೆಶಿ ಆಪ್ತ ಇಕ್ಬಾಲ್ ಹುಸೇನ ಮನೆ ಮೇಲೂ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಹಾಸನದ ಸಚಿನ್ ನಾರಾಯಣ ಮನೆ ಮೇಲೂ ದಾಳಿ ನಡೆಸಲಾಗಿದೆ.
ಡಿಕೆಶಿ ನಿವಾಸದಲ್ಲಿ 50ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದ್ದು, ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಅಲ್ಲದೆ, ಈ ಹಣ ಬೆಳಗಾವಿ ಮೂಲದ ಜಮೀನು ವಿಚಾರದ ಹಣನಾ ಅಥವಾ ಉಪಚುನಾವಣೆ ಹಿನ್ನಲೆಯಲ್ಲಿ ಹಣ ಬಂದಿರುವ ಸಾಧ್ಯತೆಯಿದೆಯಾಎಂದು ಪ್ರಶ್ಮಿಸಲಾಗಿದೆ.
ಈ ಹಣ ಅಕ್ರಮವೇ, ಸಕ್ರಮವೇ ಎಂಬುದರ ಮಾಹಿತಿ ಡಿಕೆಶಿ ನೀಡಬೇಕಿದೆ. ಈಗಾಗಲೇ ಅವರ ವಿರುದ್ದ ಆದಾಯ ಮೀರಿದ ಆಸ್ತಿ ಗಳಿಕೆ ಅಡಿ ಭ್ರಷ್ಟಾಚಾರ ಆರೋಪದ ಪ್ರಕರಣ ದಾಖಲಾಗಿದೆ.