ಧಾರವಾಡ Prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯಯೋಗೇಶಗೌಡ ಗೌಡರ ಹತ್ಯೆ ಪ್ರಕರಣದ ಸಿಬಿಐ ತನಿಖೆ ಮತ್ತೆ ಚುರುಕುಗೊಂಡಿದೆ.
ಧಾರವಾಡ ಜಿಲ್ಲೆಯ ನಾಲ್ಕನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಈ ಹಿಂದೆ ಸರ್ಕಾರಿ ಅಭಿಯೋಜಕಿಯರಾಗಿದ್ದ ಸುಮೀತ್ರಾ ಅಂಚಟಗೇರಿ, ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತರಾದ ಪ್ರಶಾಂತ್ ಕೇಕರೆ, ಬಸವರಾಜ ಮುತ್ತಗಿ, ಸುಮೀತ್ರಾ ಅಂಚಟಗೇರಿ ಸಹೋದರ ವಿಶ್ವನಾಥ ಯಂಡಿಗೇರಿ ಅವರನ್ನು ಗುರುವಾರ ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಕರೆಯಿಸಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಇಂದು ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಹಲವಾರು ಮಹತ್ಮದ ಮಾಹಿತಿಗಳನ್ನು ಕಲೆ ಹಾಕಿದೆ ಎನ್ನಲಾಗಿದೆ.
ದಿನೇ ದಿನೇ ಯೋಗೇಶ್ ಗೌಡ ಹತ್ಯೆ ಪ್ರಕರಣ ಬಹಳಷ್ಟು ಟ್ವಿಸ್ಟ್ ಪಡೆಯುತ್ತಿದ್ದು, ಈಗ ಖುದ್ದು ಮಾಜಿ ಸಚಿವ ವಿನಯ ಕುಲಕರ್ಣಿ ವರ್ಗಾವಣೆ ಮಾಡಿಸಿಕೊಂಡ ಸರಕಾರಿ ಅಭಿಯೋಜಕಿ ಸುಮೀತ್ರಾ ಅಂಚಟಗೇರಿ ಅವರ ಕರೆಸಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಸುಮೀತ್ರಾ ಅವರನ್ನು ವರ್ಗಾವಣೆ ಮಾಡಿಸಿಕೊಂಡಿದ್ದ ಜಾಡು ಹಿಡಿದು ಸಿಬಿಐ ತನಿಖೆಯು ಇಂದು ಆರೋಪಿಗಳಲ್ಲಿ ಮತ್ತಷ್ಟು ನಡುಕ ಹುಟ್ಟಿಸಿದೆ.
ಸಿಬಿಐ ಅಧಿಕಾರಿಗಳು ಇನ್ನೂ ಯಾರ ,ಯಾರನ್ನು ಕರೆದು ವಿಚಾರಣೆ ನಡೆಸಲಿದೆ ಎಂಬುದು ಬಹಳಷ್ಟು ಕುತೂಹಲ ಕೆರಳಿಸಿದೆ.