ರಾಜ್ಯ

ವಿನಯ್ ಕುಲಕರ್ಣಿ ಜೈಲು ಸೇರುತ್ತಿದ್ದಂತೆ ತೀವ್ರಗೊಂಡ ಸಿಬಿಐ ತನಿಖೆ : ಸಿಬಿಐ ಪ್ರಶ್ನೆಗಳಿಗೆ ತಬ್ಬಿಬಾದ ಬಸವರಾಜ್ ಮುತ್ತಗಿ ಆಂಡ್ ಗ್ಯಾಂಗ್

ಧಾರವಾಡ Prajakiran.com : ಮಾಜಿ ಸಚಿವ
ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲು ಸೇರುತ್ತಿದ್ದಂತೆ ಸಿಬಿಐ ತನಿಖೆ ಇನ್ನಷ್ಟು ತೀವ್ರಗೊಂಡಿದೆ.

ನಿನ್ನೆ ಒಂದೇ ದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಬಾರಿ ಬುಲಾವ್ ಕೊಟ್ಟಿದೆ.

ಸಿಬಿಐ ವಿಚಾರಣೆಗೆ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ ಪ್ರತ್ಯೇಕವಾಗಿ ಮೂರು ಬಾರಿ ವಿಚಾರಣೆ ಎದುರಿಸಿರುವುದು ತೀವ್ರ ಸ್ವರೂಪದ ತನಿಖೆ ತೋರಿಸುತ್ತದೆ.

ಸಿಬಿಐ ಕೇಳಿದ ಹತ್ತು ಹಲವು ಪ್ರಶ್ನೆಗಳಿಗೆ ತಬ್ಬಿಬಾದ ಬಸವರಾಜ‌ ಮುತ್ತಗಿ ಕೆಲ ಕಾಲ ಅವರ ಎದುರು ಎನೂ ಹೇಳಬೇಕು ಎಂದು ತೋಚದೆ ಬೆಚ್ಚಿ ಬಿದ್ದಿದ್ದಾರೆ.

ತನಿಖೆ ವೇಳೆ ಸ್ಪೋಟಕ ಮಾಹಿತಿ ಬೆಳಕಿಗೆ ಬರುತ್ತಿವೆ ಎಂದು ಹೇಳಲಾಗುತ್ತಿದೆ.

ಅದರಲ್ಲೂ ವಿಶೇಷವಾಗಿ ಚಂದು ಮಾಮ ಹಾಗೂ ಸೋಮು ನ್ಯಾಮಗೌಡ ನೀಡಿದ ಹೇಳಿಕೆ ಆಧರಿಸಿ ಬಸವರಾಜ ಮುತ್ತಗಿಯನ್ನು ಬರೋಬ್ಬರಿ ಆರೇಳು ಗಂಟೆ ಡ್ರೀಲ್ ಮಾಡಲಾಗಿದೆ.

ಕೊಲೆಗೆ ಮುನ್ನ ಮಾಜಿ ಸಚಿವರ ಅಣತಿಯಂತೆ ಸೋಮು ನ್ಯಾಮಗೌಡ ಹಾಗೂ ಚಂದುಮಾಮ ಜೊತೆಗೆ ನಡೆದ ಸಭೆಯ ಕುರಿತು ನಿಖರ ಮಾಹಿತಿ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಬಸವರಾಜ ಮುತಗಿ ತಡವರಿಸಿದ ಎಂದು ತಿಳಿದುಬಂದಿದೆ.

ಧಾರವಾಡದ ಉಪ ನಗರ ಪೊಲೀಸ್ ಠಾಣೆಯಲ್ಲಿ ಬಸವರಾಜ ಮುತ್ತಗಿ ಡ್ರಿಲ್ ನಡೆದ ನಂತರ ಅವರ ಜೊತೆಗೆ ಸಭೆ ನಡೆದಿದ ಆರೋಪದ ಮೇಲೆ ಕಾಂಗ್ರೆಸ್ ಪಕ್ಷದ ಮುಖಂಡ
ನಾಗರಾಜ ಗೌರಿಯನ್ನು ಕರೆದು ಮೊದಲು ಪ್ರತ್ಯೇಕ ಹಾಗೂ ಆನಂತರ ಗೌರಿ ಜೊತೆಗೆ ಮುಖಾಮುಖಿ ನಡೆಸಿದರು ಎನ್ನಲಾಗಿದೆ.

ನಾಗರಾಜ ಗೌರಿ ಹುಬ್ಬಳ್ಳಿಯ ಖಾಸಗಿ ಹೋಟಲ್ ನಲ್ಲಿ ಮುತ್ತಗಿ ಜೊತೆಗೆ ಸಭೆ ನಡೆಸಿರುವ ಸ್ಪೋಟಕ ಮಾಹಿತಿಯನ್ನು ಸ್ವತಃ ನಾಗರಾಜ ಗೌರಿ ಸಿಬಿಐ ಎದುರು ಬಿಚ್ಚಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಮಲ್ಲಮ್ಮ ಹೈಜಾಕ್ ನಂತರ ಈ ಸಭೆ ನಡೆದಿರುವುದು ಸತ್ಯ ಎಂಬುದು ಬೆಳಕಿಗೆ ಬಂದಿದೆ.

ಈ ಸಭೆಯಲ್ಲಿ ಜಿಪಂ ಸದಸ್ಯ
ಸುರೇಶ್ ಗೌಡ ಪಾಟೀಲ್ ಕೂಡಿದ್ದರು. ಹುಬ್ಬಳ್ಳಿಯ ಪ್ರತಿಷ್ಠಿತ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ಬಗ್ಗೆ ಪ್ರಶ್ನೆ ಕೇಳಿದಾಗ ನಾಗರಾಜ ಗೌರಿ ಹಾಗೂ ಬಸವರಾಜ ಮುತ್ತಗಿ
ತಬ್ಬಿಬ್ಬಾದ್ರು ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ವೇಳೆ ಬುಧವಾರ ಬೆಳಗ್ಗೆ ಮತ್ತೆ ಬಸವರಾಜ ಮುತ್ತಗಿ ಹಾಗೂ ಇತರ ಸಹಚರರಾದ ವಿನಾಯಕ ಕಟಗಿ, ಸ್ಯಾಂಡಿ ಅಲಿಯಾಸ್ ಸಂದೀಪ ಸವದತ್ತಿ, ವಿಕ್ರಂ ಬಳ್ಳಾರಿ, ಕೀರ್ತಿ ಕುರಹಟ್ಟಿ, ಮುದುಕಪ್ಪ ಅಲಿಯಾಸ್ ಮಹಾ ಬಳೇಶ್ವರ ಹೊಂಗಲ್ ಅವರ ತೀವ್ರ ವಿಚಾರಣೆ ನಡೆಸಿದರು.

ಅವರ ವಿಚಾರಣೆ ಮುನ್ನ ಮುತ್ತಗಿ ವಿಚಾರಣೆ ನಡೆಸಿದ ಸಿಬಿಐ ಆ ಬಳಿಕ ಅವರ ಜೊತೆಯಲ್ಲಿ ವಿಚಾರಣೆ ನಡೆಸಿದರು ಎನ್ನಲಾಗಿದೆ.

ಅಲ್ಲದೆ ಮಾಜಿಸಚಿವರ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ ಗೆ ಬುಲಾವ್ ಕೊಟ್ಟಿರುವುದು.

ಅವರನ್ನ ಕೂಡ ಇವರ ಜೊತೆಗೆ ವಿಚಾರಣೆ ನಡೆದಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಒಟ್ಟಾರೆ ಜಿಪಂ ಸದಸ್ಯ ಯೋಗೀಶಗೌಡ ಕೊಲೆಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇನ್ನೂ ಯಾರೆಲ್ಲ ವಿಚಾರಣೆ ಎದುರಿಸುತ್ತಾರೆ ಎಂಬುದು ಕಾದು ನೋಡಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *