ರಾಜ್ಯ

ಧಾರವಾಡದಲ್ಲಿ ರಸ್ತೆ ಪಕ್ಕ ನಿಂತವರ ಮೇಲೆ ಹಾಯ್ದ ಮಾಜಿ ಸಚಿವರ ಸಹೋದರನ ಕಾರು : ಇಬ್ಬರ ಸಾವು-ಒಬ್ಬರಿಗೆ ಗಂಭೀರ ಗಾಯ

ಹುಬ್ಬಳ್ಳಿ prajakiran.com :
ರಸ್ತೆ ಪಕ್ಕ ನಿಂತವರ ಮೇಲೆ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಕಾರು ಹಾಯ್ದ ಘಟನೆ ಧಾರವಾಡದಲ್ಲಿ ಸೋಮವಾರ ಸಂಜೆ ನಡೆದಿದೆ.

ಈ ರ್ದುಘಟನೆಯಲ್ಲಿ
ಇಬ್ಬರು ಸಾವವನ್ನಪ್ಪಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ‌.

007  ಕಪ್ಪು ಬಣ್ಣದ ಕಾರು ಯರಾಬಿರಿಯಾಗಿ ಓಡಿಸಿದ್ದರಿಂದ ಅಪಘಾತ ಸಂಭವಿಸಿದ ಪರಿಣಾಮ
ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್‌ಗಳು ಜಖಂಗೊಂಡಿವೆ‌.

ಕಾಂಗ್ರೆಸ್ ಮುಖಂಡ ವಿಜಯ ಕುಲಕರ್ಣಿ ಇದರಲ್ಲಿ
ಪ್ರಯಾಣಿಸುತ್ತಿದ್ದರು.
ವಿಜಯ ಕುಲಕರ್ಣಿ, ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ.

ಧಾರವಾಡದ ಕೆವಿಜಿ ಬ್ಯಾಂಕ್ ಎದುರು ಈ ರ್ದುಘಟನೆ ನಡೆದಿದೆ.

ಅಪಘಾತಪಡಿಸಿದ ಕಾರಿಗೆ ಸ್ಥಳೀಯರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ವಿಜಯ ಕುಲಕರ್ಣಿ ವಾಹನದಲ್ಲಿ ಇದ್ದರು. ಅವರು ಜನರ ಮನವೊಲಿಸಲು ಯತ್ನಿಸಿದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ದೌಡಾಯಿಸಿದ ಧಾರವಾಡ
ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ಘಟನೆಯಲ್ಲಿ
ಸಾವಿಗೀಡಾದವರನ್ಬು
ಚರಣ ಮೌನೇಶ್ವರ ನಾಯಕ
(17) ದೇವರ ಹುಬ್ಬಳ್ಳಿ, ಹಾಲಿ ವಸ್ತಿ ಜೋಶಿ ಫಾಮ್೯ ಹಾಗೂ
ಶೇಖು ಬಸಪ್ಪ ಹುದ್ದಾರ (,37)
ಎತ್ರಿನಗುಡ್ಡ ನಿವಾಸಿ
ಕೃಷಿ ವಿ ವಿ ಗುತ್ರಿಗೆ ನೌಕರ ಎಂದು ಗುರುತಿಸಲಾಗಿದೆ.

ಅಲ್ಲದೆ,ಗಾಯಾಳು
ಅರವಿಂದ ಮಲಗೌಡ ಪಾಟೀಲ ಕೆವಿಜಿ ಬ್ಯಾಂಕ್ ನೌಕರ
ಸಾಧನಕೇರಿ ನಿವಾಸಿ ಎಂದು ಪೊಲೀಸರು ಪ್ರಜಾಕಿರಣ.ಕಾಮ್ ಗೆ ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *