ಬೆಂಗಳೂರು prajakiran.com : ರಾಜ್ಯ ರಾಜಕಾರಣದಲ್ಲಿ ತೀವೃ ಕುತೂಹಲ ಕೆರಳಿಸಿದ್ದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಕೊನೆಗೂ ನಿರಿಕ್ಷೆಯಂತೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.
ರಾಜ್ಯದ ಬಿಜೆಪಿ ಸರಕಾರಕ್ಕೆ ಜುಲೈ 26ರಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಣ್ಣೀರು ಇಡುತ್ತಲೇ ಈ ಮಾತನ್ನು ಹೇಳಿದರು.
ಇದನ್ನು ನಾನು ನಾನು ದುಃಖದಿಂದ ಅಲ್ಲ. ಖುಷಿಯಿಂದ ಹೇಳುತ್ತಿದ್ದೇನೆ
ಎಂದರು
ನನಗೆ 75 ವರ್ಷ ತುಂಬುದರೂ ಎರಡು ವರ್ಷಗಳ ಕಾಲ ನನಗೆ ಮುಖ್ಯಮಂತ್ರಿ ಯಾಗಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗಾರಹ ಸಚಿವ ಅಮಿತ್ ಶಾ ಅವರಿಗೆ ಮಾತಿನಲ್ಲಿ ಅಭಿನಂದನೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷ ನನಗೆ ಎಲ್ಲವನ್ನು ನೀಡಿದೆ. ಹೈಕಮಾಂಡ್ ಸೂಚನೆಯಂತೆ ಊಟದ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ನನ್ನ ರಾಜೀನಾಮೆ ಪತ್ರವನ್ನು ನೀಡುತ್ತೇನೆ ಯಾರೂ ಅನ್ಯತಾ ಭಾವಿಸಬಾರದು ಎಂದು ಹೇಳಿದರು.