ಧಾರವಾಡ prajakiran.com : ಇವರು ಬಿಹಾರ ರಾಜ್ಯದ ನಿವಾಸಿಯಾಗಿರುತ್ತಾರೆ. ಇವರು ಲಾಕ್ಡೌನ್ ಪೂರ್ವದ ಮೂರು ತಿಂಗಳು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿನ ಖಾಸಗಿ ಗಾರ್ಮೆಂಟ್ಸ ನಲ್ಲಿ ಕಾರ್ಯನಿರ್ವಹಿಸಿ, ಅಲ್ಲಿಯೇ ವಾಸವಿರುತ್ತಾರೆ.
ಮೇ.೨೩ ರಂದು ಕಾಮಾಕ್ಷಿ ಪಾಳ್ಯದಿಂದ ಹೊರಟು ಬಸ್ ಮೂಲಕ ಮೆಜೆಸ್ಟಿಕ್ ಬಸ್ ನಿಲ್ದಾಣ ತಲುಪಿ ನಂತರ ಸಂಜೆ ೫ ಗಂಟೆಗೆ ರಾಜಹಂಸ ಬಸ್ (ಬಸ್ ನಂ ಕೆಎ-೨೫-ಎಫ್-೬೮೬೦) ಮೂಲಕ ಹೊರಟು ಮೇ.೨೪,೨೦೨೦ ರ ನಸುಕಿನ ಜಾವ ೧.೩೦ ಗಂಟೆಗೆ ಹುಬ್ಬಳ್ಳಿಯ ಗಬ್ಬೂರ ಬೈಪಾಸ್ ತಲುಪಿ ಅಲ್ಲಿಂದ ಆಟೋ ಮೂಲಕ ಹಳೇ ಮಂಟೂರು ರಸ್ತೆ ಪಕ್ಕದಲ್ಲಿನ ಆಶ್ರಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ಬಂದಿರುತ್ತಾರೆ.
ಮೇ.೨೪ ಹಾಗೂ ಮೇ.೨೫ ರಂದು ಆಶ್ರಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ವಾಸವಿರುತ್ತಾರೆ. ಮೇ.೨೬ ರಂದು ಆಟೋ ಮೂಲಕ ಮಧ್ಯಾಹ್ನ ೧೨-೩೦ ಗಂಟೆಗೆ ಚಿಟಗುಪ್ಪಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿ ಮಧ್ಯಾಹ್ನ ೩ ಗಂಟೆಗೆ ಆಶ್ರಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ಹಿಂದಿರುಗಿರುತ್ತಾರೆ.
ಅದೇ ದಿನ ಇವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿರುತ್ತದೆ.
ಮೇ.೨೭ ರಿಂದ ಮೇ.೨೯,೨೦೨೦ ರವರೆಗೆ ಹಳೇ ಮಂಟೂರು ರಸ್ತೆ ಪಕ್ಕದಲ್ಲಿನ ಆಶ್ರಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾರ್ಯನಿರ್ವಹಿಸಿರುತ್ತಾರೆ.
ಮೇ.೩೧ ರಂದು ಪಿ-೩೩೯೮ ರವರು ಕೋವಿಡ್-೧೯ ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.
ಈ ಸೋಂಕಿತರನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಆ ಎಲ್ಲ ವ್ಯಕ್ತಿಗಳು ಕೂಡಲೇ ಕರೊನಾ ಸಹಾಯವಾಣಿ ೧೦೭೭ ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು.
ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಧಾರವಾಡ ಜಿಲ್ಲಾಡಳಿತ ತಿಳಿಸಿದೆ.