ನವದೆಹಲಿ prajakiean.com : ವಿಧಾನಸಭಾ ಚುನಾವಣೆ ಫಲಿತಾಂಶ ದಿನ ನಡೆದ ಹಿಂಸಾಚಾರ ಖಂಡಿಸಿ ಮೇ 5ರಂದು ಬಿಜೆಪಿ ದೇಶಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಟಿಎಂಸಿ ಸರ್ಕಾರದ ಆಡಳಿತದ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ದೌರ್ಜನ್ಯ ಹಾಗೂ ಫಲಿತಾಂಶದ ದಿನದಂದು ಅನೇಕರು ವಿಜಯೋತ್ಸವ ಆಚರಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದಿನಿಂದ 2 ದಿನಗಳ ಕಾಲ ಬಂಗಾಳ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ವೇಳೆ ಪಕ್ಷದ ಕಾರ್ಯಕರ್ತರ ಮನೆಗೆ ಭೇಟಿ ನೀಡಲಿದ್ದಾರೆ.
ಮೇ.2 ರಂದು ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮನೆ, ಕಚೇರಿ ಹಾಗೂ ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ.
ಇದನ್ನ ವಿರೋಧಿಸಿ ಬಿಜೆಪಿ ನಾಳೆ ರಾಷ್ಟ್ರವ್ಯಾಪಿ ಧರಣೆ ನಡೆಸುವುದಾಗಿ ಘೋಷಿಸಿದೆ.