ನವದೆಹಲಿ Prajakiran.com : ಕೊರೋನಾ ಸೋಂಕನ್ನು ಭಾರತದಿಂದ ಹೋಗಲಾಡಿಸಬೇಕೆಂದರೆ ದೇಶವನ್ನು ಸಂಫೂರ್ಣ ಲಾಕ್ ಡೌನ್ ಮಾಡಬೇಕು.
ಲಾಕ್ ಡೌನ್ ವೇಳೆ ಬಡವರಿಗೆ ನ್ಯಾಯ್ ಯೋಜನೆ ಅಡಿಯಲ್ಲಿ ಆರ್ಥಿಕ ರಕ್ಷಣೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ
ಕೇಂದ್ರ ಸರ್ಕಾರದ ಅದಕ್ಷತೆಯು ಅನೇಕ ಅಮಾಯಕ ಜನರನ್ನು ಕೊಲ್ಲುತ್ತಿದೆ ಎಂದು ರಾಹುಲ್ ಟೀಕೆ ಮಾಡಿದ್ದಾರೆ.
2019ರ ವಯನಾಡು ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ನ್ಯಾಯ್ ಯೋಜನೆ ಬಗ್ಗೆ ಪ್ರಣಾಳಿಕೆ ಯಲ್ಲಿ ತಿಳಿಸಿತ್ತು.
ಇದರ ಅನ್ವಯ ಕೇಂದ್ರ ಸರ್ಕಾರವು ಬಡವರಿಗೆ ಕನಿಷ್ಠ ಆದಾಯವನ್ನು ಖಾತ್ರಿ ಪಡಿಸುವುದಾಗಿದೆ.
ಅಂದ್ರೆ ತೀರಾ ಬಡ ಕುಟುಂಬಗಳಿಗೆ ವರ್ಷಕ್ಕೆ 72,000 ನೀಡುವ ಖಾತ್ರಿ ಯೋಜನೆಯಾಗಿದೆ.