ಹುಬ್ಬಳ್ಳಿ prajakiran.com :
ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ವಿಧಯೇಕವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರಿಂದ ಹುಬ್ಬಳ್ಳಿಯಲ್ಲಿ ಬಿಜೆಪಿ ರೈತಾ ಮೊರ್ಚಾ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ನಗರದ ಗೊಪನಕೊಪ್ಪದಲ್ಲಿ ಮಹಿಳೆಯರು ಗೋ ಮಾತೆಗೆ ಆರತಿ ಮಾಡುವ ಮೂಲಕ ಸಂಭ್ರಮಿಸಿದರು.
ಅಲ್ಲದೆ, ರಾಜ್ಯ ಹಾಗೂ ಕೇಂದ್ರ ಸರಕಾರದ ಪರ ಘೋಷಣೆ ಕೂಗಿ ತಮ್ಮ ಸಂತಸ ಹಂಚಿಕೊಂಡರು.
ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕವನ್ನು ಮಂಡಿಸಿದ್ದು, ರಾಜ್ಯಪಾಲರು ಕೂಡಲೇ ಈ ವಿಧೆಯಕಕ್ಕೆ ಅಂಗೀಕಾರ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.
ಈಶ್ಬರಗೌಡ ಪಾಟೀಲ, ಸಂತೋಷ ಚವ್ಹಾನ್, ಸೇರಿದಂತೆ ಪ್ರಮುಖರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.