ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಸೇರಿದಂತೆ ಸಹಸ್ರಾರು ಜನರ ವ್ಯಾಪಕ ಬೆಂಬಲ
ಸವದತ್ತಿ ಯಲ್ಲಮ್ಮ
ಪುರಸಭೆಯಿಂದಲೂ ಜಾಕ್ ವೆಲ್ ಬಂದ್ ಗೆ ಸರ್ವಾನುಮತದ ಠರಾವು
ಧಾರವಾಡ ಪ್ರಜಾಕಿರಣ.ಕಾಮ್ : 358 ನೀರು ಸರಬರಾಜು ನೌಕರರ ಮರುನೇಮಕ ಹಾಗೂ 7 ತಿಂಗಳ ಸಂಬಳ ಬಿಡುಗಡೆಗೆ ಒತ್ತಾಯಿಸಿ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹಾಗೂ ಹಿರಿಯ ಪತ್ರಕರ್ತ ನಾಗರಾಜ ಕಿರಣಗಿ ನಡೆಸುತ್ತಿದ್ದ ಆಮರಣ ಉಪವಾಸ ಸತ್ಯಾಗ್ರಹ ಹಾಗೂ ನೂರಾರು ನೀರು ಸರಬರಾಜು ನೌಕರರ ಸರದಿ ಉಪವಾಸ ಸೋಮವಾರಕ್ಕೆ ಒಂದು ವಾರ ಪೂರೈಸಿದ ಹಿನ್ನೆಲೆಯಲ್ಲಿ ಹೋರಾಟ ಪಕ್ಷಾತೀತ ಹೋರಾಟದ ಜೊತೆಗೆ ಜನಾಂದೋಲನವಾಗಿ ಮಾರ್ಪಟ್ಟಿದೆ.
ವಾರ್ಡ್ ನಂ 1,2, 5, 6, 7 ಸೇರಿದಂತೆ ಅನೇಕ ಬಡಾವಣೆಯ
ಸಾವಿರಾರು ಜನ ಖಾಲಿ ಕೊಡ ಹಿಡಿದು ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಸೋಮವಾರ ಆಗಮಿಸಿ ತಮ್ಮ ಆಕ್ರೋಶ ಹೊರಹಾಕಿದರು.
358 ನೌಕರರ ಕುಟುಂಬ ಬೀದಿಗೆ ಬಂದರೂ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಎಲ್ ಆಂಡ್ ಹಠಾವೋ ಹುಬ್ಬಳ್ಳಿ ಧಾರವಾಡ ಬಚಾವೋ ಜನಾಂದೋಲನಕ್ಕೆ ಹಿರಿಯ ಪತ್ರಕರ್ತ ನಾಗರಾಜ ಕಿರಣಗಿ ಕರೆ ನೀಡಿದ್ದರು.
ಅವರ ಕರೆಗೆ ಅವಳಿ ನಗರದ ಮಹಾನಗರ ಪಾಲಿಕೆ ಸದಸ್ಯರು, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ, ಬಿಜೆಪಿಯ ಮುಖಂಡರು, ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು,
ಪಕ್ಷಭೇದ ಮರೆತು
ಬೆಂಬಲ ಸೂಚಿಸಿದವು.
ಹೋರಾಟ ಬೆಂಬಲಿಸಿ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ ಧರ್ಮಪತ್ನಿ, ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಗೌರಮ್ಮ ಬಲೋಜಿ, ದೀಪಾ ಸಂತೋಷ ನೀರಲಕಟ್ಟಿ, ಬಸವರಾಜ ಜಾಧವ, ನವೀನ್ ಕದಂ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಸಾಥ್ ನೀಡಿದ್ದರು.
ಅದೇ ರೀತಿ ಜಿಲ್ಲಾ ಜನತಾದಳ ಜಾತ್ಯತೀತ ಪಕ್ಷದ ಅಧ್ಯಕ್ಷರಾದ ಗುರುರಾಜ ಹುಣಸಿಮರದ, ದೇವರಾಜ ಕಂಬಳಿ, ಶಾಂತವೀರ ಬೆಟಗೇರಿ, ಮಾರುತಿ ಹಿಂಡಸಗೇರಿ, ಮಂಜುನಾಥ ಹಗೇದಾರ,
ಆಮ್ ಆದ್ಮಿ ಪಕ್ಷದ ಮುಖಂಡ ವಿಕಾಸ ಸೋಪ್ಪಿನ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಭಟನಾಕಾರರಿಗೆ ದೈರ್ಯ ತುಂಬಿದರು.