ಬಳ್ಳಾರಿ prajakiran.com : ಎರಡು ಗುಂಪುಗಳ ನಡುವೆ ಭಾರೀ ಘರ್ಷಣೆ ನಡೆದ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಿನ್ನೇ ರಾತ್ರಿ ನಡೆದಿದೆ.
ಬಳ್ಳಾರಿಯ ಮರಿ ಸ್ವಾಮಿ ಮಠದ ಬಳಿ ನಡೆದ ಈ ಘಟನೆ ಸಂಭವಿಸಿದ್ದು, ನಿನ್ನೆ ರಾತ್ರಿ 10 ಗಂಟೆಗೆ ಕ್ಷುಲ್ಲಕ ಕಾರಣಗಳಿಂದ ಆರಂಭವಾದ ಜಗಳ ದೊಡ್ಡಮಟ್ಟಕ್ಕೆ ತಿರುಗಿದೆ.
ಜಗಳ ಆರಂಭವಾಗುತ್ತಿದ್ದಂತೆ ಸಂಪೂರ್ಣ ಏರಿಯಾದ ಜನರಿಂದ ಗಲಾಟೆ ಶುರುವಾಗಿದೆ. ಮಹಿಳೆಯರು, ಮಕ್ಕಳು ಎನ್ನದೇ ಮನೆಗಳಿಗೆ ನುಗ್ಗಿ ಯುವಕರು ಸಿಕ್ಕ ಸಿಕ್ಕವರನ್ನು ಹೊಡೆದಿದ್ದಾರೆ.
ಬಳ್ಳಾರಿಯಲ್ಲಿ ಮತ್ತೆ ಮಚ್ಚು ಲಾಂಗ್ ಜಳಪಿಸಿದ್ದರಿಂದ ಜನ ಗಾಬರಿಗೊಂಡು ಭಯಭೀತರಾಗಿದ್ದಾರೆ. ಮಚ್ಚು ದೊಣ್ಣೆಯಿಂದ ಸಿಕ್ಕಿ ಸಿಕ್ಕವರ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ.
ಗುಂಪು ಘರ್ಷಣೆಯಲ್ಲಿ 25 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಇದಲ್ಲದೆ, ಗುಂಪು ಘರ್ಷಣೆಯಲ್ಲಿ 30 ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದು,
ಪುಟ್ಟ ಮಕ್ಕಳು, ಮಹಿಳೆಯರು ಎನ್ನದೇ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ