ಬೆಂಗಳೂರು prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಕರೋನಾ ಕಾಡುತ್ತಿದೆ. ಅದರಲ್ಲೂ ಕರೋನಾ ಸೇನಾನಿಗಳನ್ನು ಬಿಡುತ್ತಿಲ್ಲ.
ಸುಮಾರು 32 ಪೊಲೀಸ್ ಠಾಣೆಗಳನ್ನು ಬೆಂಗಳೂರು ನಗರವೊಂದರಲ್ಲಿಯೇ ಸೀಲ್ ಡೌನ್ ಮಾಡಲಾಗಿದೆ.
ಇದು ಬೆಂಗಳೂರು ನಗರ ಪೊಲೀಸರನ್ನು ಆತಂಕ ಹಾಗೂ ಸಂಕಷ್ಟಕ್ಕೆ ಸಿಲುಕಿಸಿದೆ. ಬೆಂಗಳೂರಿನ ವಾರ್ಡ್ ವಾರ್ಡ್ ಗಳಲ್ಲಿ ಮಹಾಮಾರಿ ಕರೋನಾ ಅಟ್ಟಹಾಸ ಮೆರೆಯುತ್ತಿದೆ.
ಸುಮಾರು 47ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ 50ಕ್ಕೂ ಅಧಿಕ ಪಾಸಿಟಿವ್ ಬಂದಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯದಲ್ಲಿ 2 ಸಾವಿರ ಕೇಸ್ ಇರುವುದು ಆಘಾತಕಾರಿ ಸಂಗತಿಯಾಗಿದೆ.
ಜಯನಗರ, ಬಸವನಗುಡಿ, ಮಡಿವಾಳ, ಬಿಟಿಎಂ ಲೇ ಔಟ್, ಶಾಕಂಬರಿ ನಗರಿ, ಸದ್ದುಗುಂಟೆ ಪಾಳ್ಯ, ಹನುಮಂತ ನಗರ, ವಿದ್ಯಾಪೀಠ, ವಿವಿಪುರಂ, ಕೋರಮಂಗಲ, ಸುಂಕೇನಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ಪಶ್ಚಿಮ ವಲಯದ ವಾರ್ಡ್ ಗಳಲ್ಲಿ ಕಿಲ್ಲರ್ ಕರೋನಾ ರಣಕೇಕೆ ಹಾಕುತ್ತಿದೆ. ಚಿಕ್ಕಪೇಟೆ, ಪಾದರಾಯನಪುರ, ಚಾಮರಾಜಪೇಟೆ, ಬಳೇಪೇಟೆ, ಸುಭಾಷ ನಗರ, ರಾಜಾಜಿನಗರ, ಕಾಟನ್ ಪೇಟೆ, ಕೆ.ಆರ್. ಮಾರ್ಕೇಟ್ ಕಾಡುಮಲ್ಲೇಶ್ವರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರೋನಾ ಸೋಂಕಿತರಿದ್ದಾರೆ.
ಅದೇ ರೀತಿ ಬೆಂಗಳೂರು ಪೂರ್ವ ವಲಯ ಪುಲಕೇಶಿ ನಗರ, ಬಾಣಸವಾಡಿ, ಶಿವಾಜಿ ನಗರ, ಶಾಂತಿನಗರ, ವಸಂತನಗರ, ಶಾಂತಲಾ ನಗರದಲ್ಲೂ ಕಂಡು ಬಂದಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನಿರ್ಲ್ಯಕ್ಷತನ ಮುಂದುವರೆದಿದೆ.
ನಿನ್ನೇಯಷ್ಟೇ ಕೋವಿಡ್ ಟೆಸ್ಟ್ ಪಾಸಿಟಿವ್ ಬಂದು ವ್ಯಕ್ತಿಯೊಬ್ಬರು ಸತ್ತರೂ ಅವರ ಕುಟುಂಬದವರನ್ನು ಕ್ವಾರಂಟಿನ್ ಮಾಡಿಲ್ಲ.
ಏರಿಯಾವನ್ನು ವಾರ ಕಳೆದರೂ ಸ್ಯಾನಿಟೇಶರ್ ಮಾಡಿಲ್ಲ ಎಂದು ಸ್ಥಳೀಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.