ಅಪರಾಧ

ಧಾರವಾಡದ ಯರಿಕೊಪ್ಪದಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ….!

ಧಾರವಾಡ prajakiran. com : ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಧಾರವಾಡ  ತಾಲೂಕಿನ ಯರಿಕೊಪ್ಪ ಬಳಿ ನಿನ್ನೆ ಸಂಜೆ ನಡೆದಿದೆ.

ಯರಿಕೊಪ್ಪ ಗ್ರಾಮದ ಹನುಮಂತಪ್ಪ ಬಸಪ್ಪ ಹುಲೆಪ್ಪನವರ ಎಂಬಾತನೇ ಹಲ್ಲೆಗೊಳಗಾದ ಯುವಕ.

ಈತನನ್ನು ಅನಿಲ ಹೂವಪ್ಪ ಸೂರ್ಯವಂಶಿ, ಬಸವರಾಜ ಗಂಗಪ್ಪ ಶೇತಸನದಿ, ದೇವರಾಜ ಮಲ್ಲಿಕಾರ್ಜುನ ರೊಟ್ಟಿಗವಾಡ ಮತ್ತು ನಾಗರಾಜ ಬಸನಗೌಡ ಹಲ್ಲೆ ಮಾಡಿದವರು.

ಪ್ರಯಾಣಿಕರನ್ನು ಸಾಗಿಸುವ ಟಾಟಾ ಮ್ಯಾಜಿಕ್ ವಾಹನದ ಚಾಲಕನಾದ ಹನುಮಂತಪ್ಪ ಹುಲೆಪ್ಪನವರ ಮತ್ತು ಇತರರ ಮಧ್ಯೆ ವಾಹನ ಸರದಿಗೆ ನಿಲ್ಲಿಸುವ ಸಲುವಾಗಿ ಜಗಳ ಆರಮಭವಾಗಿದೆ.

ನಂತರ ನಾಲ್ವರು ಆರೋಪಿಗಳು ಸೇರಿ ಹನುಮಂತಪ್ಪನನ್ನು ಬಡಿಗೆ ಮತ್ತು ಕಬ್ಬಿಣ ಸರಳುಗಳಿಂದ ಮಾರಣಾಂತಿಕವಾಗಿ ಗಾಯಗೊಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ಹನುಮಂತಪ್ಪನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ನಡೆಸಿದ ನಾಲ್ವರೂ ಆರೋಪಿಗಳನ್ನು ಸಿಪಿಐ ಶ್ರೀಧರ ಸತಾರೆ ಮತ್ತು ಎಎಸ್‌ಐ ಎಫ್.ಎಂ.ಮಂಟೂರ ಅವರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *