ಅಪರಾಧ

ಧಾರವಾಡದಲ್ಲಿ ಅಮಾಯಕರನ್ನು ಥಳಿಸುತ್ತಿದ್ದಾಗ ಬಿಡಿಸಲು ಹೋದವರಿಗೆಯೇ ಥಳಿಸಿದ ರೌಡಿ ಗ್ಯಾಂಗ್

ಧಾರವಾಡ prajakiran.com :
ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹನುಮಂತ ನಗರ ಬಡಾವಣೆಯಲ್ಲಿ ಅಮಾಯಕರನ್ನು ಥಳಿಸುತ್ತಿದ್ದಾಗ ಬಿಡಿಸಲು ಹೋದವರಿಗೆಯೇ ಥಳಿಸಿದ ಘಟನೆ ನಡೆದಿದೆ.

ರೌಡಿಶೀಟರ್ ಗ್ಯಾಂಗ್ ಲೀಡರ್ ಮಂಜುನಾಥ ಹಿರೇಮನಿ ಹಾಗೂ ರೌಡಿ ಸಹೋದರರಾದ ತಿರುಪತಿ ಹಿರೇಮನಿ, ರಾಹುಲ್ ಹಿರೇಮನಿ, ಅಣ್ಣಪ್ಪ ಹಿರೇಮನಿ, ಕೃಷ್ಣ ಹಿರೇಮನಿ
ಎಂಬುವರೇ ಮನಬಂದಂತೆ ಇಟ್ಟಂಗಿಯಿಂದ ಥಳಿಸಿದ್ದಾರೆ ಎಂದು ಹಲ್ಲೆಗೊಳಗಾದವರು ಆರೋಪಿಸಿದ್ದಾರೆ.

ಇದರಿಂದಾಗಿ ಮೈಲಾರಿ ಮಾದರ, ಲಕ್ಷ್ಮಣ ಮಾದರ ಹಾಗೂ ಅಜಯ ಕೊರವರ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೂವರು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿ ಹೆಚ್ಚಿನ  ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರು ಹಲ್ಲೆ ಮಾಡಿದ ವೀಡಿಯೋ ವಾಟ್ಸಪ್ ಗಳಲ್ಲಿ ಹರಿದಾಡುತ್ತಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್, ಧಾರವಾಡ ಎಸಿಪಿ ಜಿ. ಅನುಷಾ ಅವರ ಗಮನಕ್ಕೆ ಬಂದಿದೆ.

ಈ ಕುರಿತು ಅವರಿಬ್ಬರೂ ಕಡಕ್ ಕ್ರಮ ಕೈಗೊಳ್ಳುತ್ತಾರಾ, ಅವರ ಆಟೋಟೋಪಗಳಿಗೆ ಬ್ರೇಕ್ ಹಾಕ್ತಾರಾಕಾದು ನೋಡಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *