ಧಾರವಾಡ prajakiran. com ಮಾ.2:
ಧಾರವಾಡ ಜಿಲ್ಲೆಯ ನಾಲ್ಕು ವಿದ್ಯಾರ್ಥಿಗಳು ಎಮ್.ಬಿ.ಬಿ.ಎಸ್. ವೈದ್ಯಕೀಯ ವಿಷಯ ಅಧ್ಯಯನಕ್ಕಾಗಿ ಉಕ್ರೇನ್ ರಾಷ್ಟಕ್ಕೆ ಹೋಗಿದ್ದು, ಯುದ್ಧದ ಸಂದರ್ಭದಲ್ಲಿ ಅಲ್ಲಿಯೇ ಸಿಲುಕಿ ಕೊಂಡಿದ್ದಾರೆ.
ಧಾರವಾಡದ ಇಬ್ಬರು, ಹುಬ್ಬಳ್ಳಿಯ ಒರ್ವ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಒರ್ವ ವಿದ್ಯಾರ್ಥಿನಿ ಈಗ ಉಕ್ರೇನ್ ರಾಷ್ಟ್ರದ ಬೇರೆ ಬೇರೆ ನಗರಗಳಲ್ಲಿ ಇದ್ದಾರೆ.
ಅವರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ಭಾರತ ಸರಕಾರ ಮತ್ತು ಕರ್ನಾಟಕ ಸರಕಾರ ಪ್ರಯತ್ನಿಸುತ್ತಿವೆ. ಅದಕ್ಕೆ ಅಗತ್ಯವಿರುವ ಸುರಕ್ಷಿತ ಸಾರಿಗೆ, ರಾಜತಾಂತ್ರಿಕ ಕ್ರಮಗಳನ್ನು ಸರಕಾರಗಳು ಕೈಗೊಳ್ಳುತ್ತಿವೆ.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಉಕ್ರೇನ್ ದಲ್ಲಿ ಸಿಲುಕಿಕೊಂಡಿರುವ ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳ ಮನೆಗೆ ಇಂದು ಬೆಳಿಗ್ಗೆ ತೆರಳಿ, ಅವರ ಪಾಲಕರನ್ನು ಭೇಟಿ ಮಾಡಿದರು.
ಮತ್ತು ಅವರೊಂದಿಗೆ ಸಮಾಲೋಚಿಸಿ, ಸರಕಾರದ ಕ್ರಮಗಳ ಬಗ್ಗೆ ಮನವರಿಕೆ ಮಾಡಿದರು.
ವಿದ್ಯಾರ್ಥಿಗಳ ಸಂಕಷ್ಟ ನೆನೆದು, ನೊಂದಿರುವ ಪಾಲಕರಿಗೆ ಜಿಲ್ಲಾಧಿಕಾರಿಗಳು ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ., ತಹಸಿಲ್ದಾರರಾದ ಡಾ.ಸಂತೋಷ ಬಿರಾದಾರ, ಪ್ರಕಾಶ ನಾಶಿ, ಶಶಿಧರ ಮಾಡ್ಯಾಳ ಮತ್ತು ಅಶೋಕ ಶಿಗ್ಗಾಂವಿ ಇದ್ದರು.