*ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ವಂಚನೆಪ್ರಕರಣ*
*ಒಂಬತ್ತನೇ ಆರೋಪಿಯಾಗಿರುವ ಎಫ್ ಡಿಸಿ ಅಮಿತ್ ಮುದ್ದಿ*
*ಕೆಐಎಡಿಬಿ ಬಹುಕೋಟಿ ಹಗರಣದ ಆರೋಪ ಎದುರಿಸುತ್ತಿದ್ದ ಎಫ್ ಡಿಸಿ ಅಮಿತ್ ಮುದ್ದಿ*
*ಹಲವು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೊನೆಗೂ ಎತ್ತಂಗಡಿ*
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಎಫ್ ಡಿಸಿಯಾಗಿದ್ದ ಅಮಿತ್ ಮುದ್ದಿ ನಿಯೋಜನೆ ಮೇಲೆ ಕೆ ಐ ಎಡಿಬಿಗೆ ಬಂದಿದ್ದ ಅಮಿತ್ ಮುದ್ದಿಯನ್ನು ಮೂಲ ಮಾತೃ ಇಲಾಖೆಗೆ ಮರಳಿ ಕಳುಹಿಸಲಾಗಿದೆ.
ಇವರು ಕೆಲಸ ನಿರ್ವಹಿಸಿದ ಹಲವು ವರ್ಷದ ಅವಧಿಯಲ್ಲಿಯೇ ಇವರ ಮೇಲೆ ಗಂಭೀರವಾದ ಆರೋಪ ಕೇಳಿಬಂದಿದ್ದವು.
ಇವರು ನಿವೃತ್ತ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ ಅವಧಿಯಲ್ಲಿ ಕೆಲಸ ನಿರ್ವಹಿಸಿದ್ದರು. ಆ ಅವಧಿಯಲ್ಲಿ ನಡೆದ 20 ಕೋಟಿ ಹಗರಣ ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿದೆ.
ಇದಲ್ಲದೇ, ಇಟ್ಟಿಗಟ್ಟಿಯ 9 ಎಕರೆ 39ಗುಂಟೆ ಪ್ರಕರಣದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ 2 ಕೋಟಿ 75ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಇಟ್ಟಿಗಟ್ಟಿಯ
ಕರೆಪ್ಪ ಪೂಜಾರ ಅವರು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದಲ್ಲಿ ಅಮಿತ್ ಮುದ್ದಿ ಒಂಬತ್ತನೇ ಆರೋಪಿಯಾಗಿರುವುದು ಇಲ್ಲಿ ಸ್ಮರಿಸಬಹುದು.