ರಾಜ್ಯ

ಧಾರವಾಡ ಕೆ ಐ ಎ ಡಿ ಬಿಯ ಅಮಿತ್ ಮುದ್ದಿ ಕೊನೆಗೂ ಎತ್ತಂಗಡಿ

*ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ವಂಚನೆಪ್ರಕರಣ*

*ಒಂಬತ್ತನೇ ಆರೋಪಿಯಾಗಿರುವ ಎಫ್ ಡಿಸಿ ಅಮಿತ್ ಮುದ್ದಿ*

*ಕೆಐಎಡಿಬಿ ಬಹುಕೋಟಿ ಹಗರಣದ ಆರೋಪ ಎದುರಿಸುತ್ತಿದ್ದ ಎಫ್ ಡಿಸಿ ಅಮಿತ್ ಮುದ್ದಿ*

*ಹಲವು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೊನೆಗೂ ಎತ್ತಂಗಡಿ*

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಎಫ್ ಡಿಸಿಯಾಗಿದ್ದ ಅಮಿತ್ ಮುದ್ದಿ ನಿಯೋಜನೆ ಮೇಲೆ ಕೆ ಐ ಎಡಿಬಿಗೆ ಬಂದಿದ್ದ ಅಮಿತ್ ಮುದ್ದಿಯನ್ನು ಮೂಲ ಮಾತೃ ಇಲಾಖೆಗೆ ಮರಳಿ ಕಳುಹಿಸಲಾಗಿದೆ.

ಇವರು ಕೆಲಸ ನಿರ್ವಹಿಸಿದ ಹಲವು ವರ್ಷದ ಅವಧಿಯಲ್ಲಿಯೇ ಇವರ ಮೇಲೆ ಗಂಭೀರವಾದ ಆರೋಪ ಕೇಳಿಬಂದಿದ್ದವು.

ಇವರು ನಿವೃತ್ತ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ ಅವಧಿಯಲ್ಲಿ ಕೆಲಸ ನಿರ್ವಹಿಸಿದ್ದರು. ಆ ಅವಧಿಯಲ್ಲಿ ನಡೆದ 20 ಕೋಟಿ ಹಗರಣ ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿದೆ.

ಇದಲ್ಲದೇ, ಇಟ್ಟಿಗಟ್ಟಿಯ 9 ಎಕರೆ 39ಗುಂಟೆ ಪ್ರಕರಣದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ 2 ಕೋಟಿ 75ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಇಟ್ಟಿಗಟ್ಟಿಯ
ಕರೆಪ್ಪ ಪೂಜಾರ ಅವರು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದಲ್ಲಿ ಅಮಿತ್ ಮುದ್ದಿ ಒಂಬತ್ತನೇ ಆರೋಪಿಯಾಗಿರುವುದು ಇಲ್ಲಿ ಸ್ಮರಿಸಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *