ಬೆಂಗಳೂರು prajakiran.com : ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಕರ್ನಾಟಕದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ಅನ್ನು ಜೂನ್ 14 ರ ವರೆಗೆ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಪ್ರಸುತ್ತ ಕೊರೋನಾ ಸೋಕಿನ ಪ್ರಮಾಣ ಇಳಿಮುಖವಾದರೂ ಸರಪಳಿಯನ್ನು ಕಡಿತಗೊಳಿಸುವ ಅನಿವಾರ್ಯ ಇರುವ ಕಾರಣ ಜೂನ್ 14 ರ ಮುಂಜಾನೆ 6 ಗಂಟೆ ವರೆಗೆ ಲಾಕ್ ಡೌನ್ ವಿಸ್ತರಿಸಿ ಆದೇಶ ನೀಡಿದ್ದಾರೆ.
ಇದೇ ವೇಳೆ ರಫ್ತು ವಲಯದ ಕೈಗಾರಿಕೆಗಳಿಗೆ ಷರತ್ತು ಬದ್ಧ ಪರವಾನಿಗೆ ನೀಡಲಾಗಿದೆ ಎಂದು ಬಿ.ಎಸ್ ವೈ ವಿವರಿಸಿದರು.
ಜೊತೆಗೆ ಎರಡನೇ ಹಂತದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು. ಪವರ್ ಲೋಮ್ 59 ಸಾವಿರ ಕಾರ್ಮಿಕರಿಗೆ ತಲಾ ಮೂರು ಸಾವಿರ ನೆರವು, ದೂರದರ್ಶನ ಹಾಗೂ ಚಲನಚಿತ್ರದ ಅಸಂಘಟಿತ 29 ಸಾವಿರ ಕಾರ್ಮಿಕರಿಗೆ ತಲಾ ಮೂರು ಸಾವಿರ, 18700 ಮೀನುಗಾರರಿಗೆ ಮೂರು ಸಾವಿರ, ಸಿ ದರ್ಜೆಯ ಮುಜರಾಯಿ ದೇವಾಲಯದ ಅರ್ಚಕರು, ಅಡುಗೆ ಸಹಾಯಕರಿಗೆ ತಲಾಮೂರು ಸಾವಿರ, ಆಶಾ ಕಾರ್ಯಕರ್ತೆ ಯರಿಗೆ ಮೂರು, ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ ಎರಡು ಸಾವಿರ ನೆರವು, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರಿಗೆ ಐದು ಸಾವಿರ ನೆರವು ಪ್ರಕಟಿಸಲಾಗಿದೆ.