ಹುಬ್ಬಳ್ಳಿ prajakiran.com : ವಕೀಲ ವಿನೋದ ಪಾಟೀಲ್ ಮತ್ತು ನವನಗರ ಪೊಲೀಸ್ ಇನ್ಸಪೆಕ್ಟರ್ ಪ್ರಭು ಸೂರಿನ್ ಜಟಾಪಟಿ ವಿಚಾರ ತಾರಕ್ಕೇರಿದೆ.
ಇದರಿಂದಾಗಿ ಮನನೊಂದ ಪೊಲೀಸರು ಸಾಮೂಹಿಕ ವರ್ಗಾವಣೆ ಕೇಳಿದ್ದಾರೆ.
ಪ್ರಭು ಸೂರಿನ್ ಮತ್ತು ಪೊಲೀಸರ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ವಕೀಲರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪ್ರಕರಣ ಕಾವು ಪಡೆದಿದೆ.
ಸೋಮವಾರದವರೆಗೆ ಪೊಲೀಸರ ಮೇಲೆ ಸೂಕ್ತ ಕ್ರಮಕ್ಕೇ ಗಡುವು ನೀಡಿದ ಹಿನ್ನಲೆಯಲ್ಲಿ ಇತ್ತ ನವನಗರ ಪೊಲೀಸ್ ಠಾಣೆಯ ಮುಂದೆ ಪೊಲೀಸರು ಪ್ರತಿಭಟನೆಗೆ ಮುಂದಾದರು.
ಹುಬ್ಬಳ್ಳಿಯ ನವನಗರದ ಎಪಿಎಮ್ ಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆಗೆ ಸಜ್ಜಾದರು.
ವಕೀಲರ ಧಾರವಾಡದಲ್ಲಿನ ಪ್ರತಿಭಟನೆ ಮತ್ತು ಬೇಡಿಕೆ ಹಿನ್ನಲೆಯಲ್ಲಿ ಅಸಮಾಧಾನಗೊಂಡ ಪೊಲೀಸರು ತಮ್ಮ ಠಾಣೆ ಮುಂದೆ 40 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದ್ದಿ ಸಾಮೂಹಿಕ ವರ್ಗಾವಣೆಗೆ ಒತ್ತಾಯಿಸಿದರು.
ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡು ವರ್ಗಾವಣೆಗೆ ಒತ್ತಾಯಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರ ಕಚೇರಿ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಕಾದು ನೋಡಬೇಕು.