ಧಾರವಾಡ prajakiran.com : ಮಳೆ ಹಾನಿ ಪರಿಹಾರ ಮಂಜೂರು ಮಾಡಲು ಹತ್ತು ಸಾವಿರ ಲಂಚದ ಬೇಡಿಕೆಯಿಟ್ಟಿದ್ದ ಗ್ರಾಮಲೆಕ್ಕಾಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಬಲೆಗೆ ಕೆಡುವುದರಲ್ಲಿ ಯಶಸ್ವಿಯಾದ ಘಟನೆ
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ನಾಲ್ಕನೇ ವಾರ್ಡಿನ ನಿವಾಸಿಯೊಬ್ವರ ಮನೆಯು ಸಂಪೂರ್ಣ ಕುಸಿತಗೊಂಡಿತ್ತು.
ಐದು ಲಕ್ಷ ರೂಪಾಯಿ ಪರಿಹಾರಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸಿದ್ದ ಸಂತ್ರಸ್ತನಿಗೆ ಒಂದು ಲಕ್ಷ ಮೊದಲ ಕಂತಿನಹಣ ಬಿಡುಗಡೆ ಆಗಿತ್ತು.
ಎರಡನೇ ಕಂತಿನ ಹಣ ಒಂದೂವರೆ ಲಕ್ಷ ಬಿಡುಗಡೆಗೆ ಹದಿನೈದು ಸಾವಿರ ಲಂಚದ ಬೇಡಿಕೆಯ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಐದು ಸಾವಿರ ಪಡೆದು ಇನ್ನುಳಿದ ಹತ್ತು ಸಾವಿರಕ್ಕೆ ಎದುರು ನೋಡುತ್ತಿದ್ದ.
ಇಂದು ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಂಚದ ಸಮೇತ ಗ್ರಾಮ ಲೆಕ್ಕಾಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿಯನ್ನ ಪ್ರದೀಪ ಪುಂಡಲಿಕ ಬಸವಂತಕರ್ ಎಂದು ಗುರುತಿಸಲಾಗಿದೆ.
ಆತನನ್ನು ಬಂಧಿಸಿ, ಅವನ ಬಳಿಯಿದ್ದ ಹತ್ತು ಸಾವಿರ ಲಂಚದ ಹಣವನ್ನು ಜಪ್ತ ಮಾಡಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.