ಚಿತ್ರದುರ್ಗ prajakiran.com : ಲಂಚ ಸ್ವೀಕರಿಸುವ ವೇಳೆ ಗ್ರಾ.ಪಂ ಪಿಡಿಒಯೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಹೊಳಲ್ಕೆರೆ ತಾಲ್ಲೂಕಿನ ಟಿ. ನುಲೇನೂರುನಲ್ಲಿ ನಡೆದಿದೆ.
ಟಿ. ನುಲೇನೂರು ಗ್ರಾ.ಪಂ ಪಿಡಿಒ. ಶ್ರೀನಿವಾಸ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಮನೆಯ ಇ ಸ್ವತ್ತು ಹಾಗೂ ಜಾಬ್ ಕಾರ್ಡ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಗ್ರಾಮದ ನಿವಾಸಿಯಾಗಿರುವ ಗುರುಶಾಂತಪ್ಪ ಎಂಬುವವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ, ಕೆಲಸ ಮಾಡಿಕೊಡಲು 2 ಸಾವಿರ ಬೇಡಿಕೆ ಇಟ್ಟಿದ್ದರು.
ಈ ಕುರಿತು ಎಸಿಬಿಗೆ ದೂರು ನೀಡಿದ್ದ ಗುರುಶಾಂತಪ್ಪ, ಇಂದು 2 ಸಾವಿರ ರೂಪಾಯಿಯನ್ನು ಪಿಡಿಒಗೆ ಕೊಡುವಾಗ, ಲಂಚ ಪಡೆಯಲು ಮುಂದಾಗಿದ್ದ ಪಿಡಿಒ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.