ಧಾರವಾಡ prajakiran.com : ಆಕಸ್ಮಿಕ ಬೆಂಕಿ ತಗುಲಿ ಎರಡು ಬಣವೆಗಳು ಸುಟ್ಟು ಭಸ್ಮವಾಗಿರುವ ಘಟನೆ ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದಲ್ಲಿ ನಡೆದಿದೆ.
ಲಕಮಾಪೂರ ಗ್ರಾಮದ ರೈತ ಅಶೋಕ ಹುಡೆದ್ ಎಂಬುವವರಿಗೆ ಸೆರಿದ ಬಣವೆಗಳು ಎಂದು ತಿಳಿದುಬಂದಿದೆ.
ಸರಿ ಸುಮಾರು ಎರಡು ಲಕ್ಷ ಮೌಲ್ಯದ ಬಣವೇಗಳು, ಬೇಸಿಗೆ ಸಮಯದಲ್ಲಿ ದನಗಳಿಗೆ ಮೇವು ಹಾಕಲು ರೈತ ಅಶೋಕ ಬಣವಿಯನ್ನು ಲಕಮಾಪೂರ ಗ್ರಾಮದಲ್ಲಿ ವಟ್ಟಿದ್ದರು.
ಇದೀಗ ಆಕಸ್ಮಿಕ ಬೆಂಕಿ ತಗುಲಿ ಎರಡು ಬಣವಿ ಸಂಪೂರ್ಣ ಸುಟ್ಟು ರೈತನ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು ಪೋಲಿಸರು ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.