ಹುಬ್ಬಳ್ಳಿ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ಐಎಎಸ್ ಅಧಿಕಾರಿ ಬಿ.ಗೋಪಾಲಕೃಷ್ಣ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಧಾರವಾಡ ಉಪವಿಭಾಗಧಿಕಾರಿ ಗೋಪಾಲಕೃಷ್ಣ ಅವರನ್ನು ವರ್ಗಾವಣೆ ಮಾಡಿ
ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಈ ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಅವರು ಐಎಎಸ್ ಅಧಿಕಾರಿ ಡಾ.ಬಿ.ಗೋಪಾಲಕೃಷ್ಣ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಮಸ್ಯೆಗಳ ಆಗರವಾಗಿದ್ದು, ಚುನಾವಣೆ ಮುಗಿದು ಹಲವು ತಿಂಗಳು ಗತಿಸಿದರೂ ಮಹಾನಗರ ಪಾಲಿಕೆ ಸದಸ್ಯರಾಗಿ ಈವರೆಗೆ ಅಧಿಕಾರ ಸ್ವೀಕರಿಸದೆ ಅಧಿಕಾರದ ಗದ್ದುಗೆ ಏರಲು ಚಡಪಡಿಸುತ್ತಿರುವವರು ಒಂದಡೆಯಾದರೆ, ಇನ್ನೊಂದೆಡೆ ಪ್ರಕರಣ ನ್ಯಾಯಾಲಯದ ಮುಂದೆ ಇದೆ
ಹೀಗಾಗಿ ಇವರಿಗೆ ಅಧಿಕಾರ ನೀಡಬೇಡಿ, ಮೊದಲು ಮೀಸಲಾತಿ ಸರಿಪಡಿಸಿ ಎಂದರೆ ಇನ್ನೂ ಕೆಲವರು ನಕಲಿ ಜಾತಿ ಪ್ರಮಾಣ ಪತ್ರ ಹೊಂದಿರುವ ಸದಸ್ಯರ ಅನರ್ಹಗೊಳಿಸಿ ಎಂದು ಬೆನ್ನು ಹತ್ತಿದ್ದಾರೆ.
ಇದಲ್ಲದೆ, ಕಸ ವಿಲೇವಾರಿ, ಪೌರ ಕಾರ್ಮಿಕರ ಸಮಸ್ಯೆ ಸೇರಿದಂತೆ ಹತ್ತು ಹಲವು ಸವಾಲುಗಳನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.