ರಾಜ್ಯ

ಧಾರವಾಡದ ಜಲಮಂಡಳಿಯ 650 ನೌಕರರ 7 ತಿಂಗಳ ಸಂಬಳ ಏಳು ಕೋಟಿ, ಏಳು ಕೋಟಿ ಗೆ…..!

ಸರಕಾರ ಎಲ್ ಆಂಡ್ ಟಿ ಎಜೆಂಟ್ ಆಗಿ ಕೆಲಸ ಮಾಡ್ತಾಯಿದೆ : ದೀಪಕ ಚಿಂಚೋರೆ

ದಮ್ ಇದ್ದರೆ ತಾಕತ್ ಇದ್ದರೆ ಎಲ್ ಆಂಡ್ ಟಿ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಿದ್ರೆ ಪೌರ ಸನ್ಮಾನ ಮಾಡ್ತಿವಿ

ಧಾರವಾಡ ಪ್ರಜಾಕಿರಣ.ಕಾಮ್ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ
ಕುಡಿಯುವ ನೀರಿನ ಸಮಸ್ಯೆ ಆಗಿದೆ. ಇದಕ್ಕೆ ಗುತ್ತಿಗೆ ಪಡೆದ ಎಲ್ ಆಂಡ್ ಟಿ ಹೊಣೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಆರೋಪಿಸಿದರು.

ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,
ಸರಕಾರ ಆಂಡ್ ಟಿ ಎಜೆಂಟ್ ಆಗಿ ಕೆಲಸ ಮಾಡ್ತಾಯಿದೆ. ಹೀಗಾಗಿ ಏಳು ತಿಂಗಳ ಸಂಬಳ ನೀಡದೆ 650 ಕುಟುಂಬ ಬೀದಿಗೆ ಬಂದಿವೆ ಎಂದು ಆರೋಪಿಸಿದರು.

ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಹೇಳಿದ್ದಾರೆ.

ಅಲ್ಲದೆ, ನೌಕರರನ್ನು ಕೆಲಸಕ್ಕೆ ಬೇಡ ಎಂದು ಹೇಳಿದ್ದಾರೆ. ಎಳು ತಿಂಗಳ ಸಂಬಳ ಏಳು ಕೋಟಿ ಎಲ್ಲಿಗೆ ಹೋಯಿತು ಎಂದು ಕಿಡಿಕಾರಿದರು.

ಅವಳಿ ನಗರದ ಜನರಿಗೆ ಪಾಲಿಕೆ, ಜಲಮಂಡಳಿಯವರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನಾವು ಈ ಹಿಂದೆ ಕಾಂಗ್ರಸ್ ಅಧಿಕಾರದಲ್ಲಿದ್ದಾಗ ಎರಡು ದಿನಕ್ಕೆ ನೀರು ಕೊಡುತ್ತಿದ್ದೇವು. ಈಗ ಡ್ಯಾಂ ನಾಗ ನೀರು ಇದ್ದರೂ ಕೊಡ್ತಾಯಿಲ್ಲ. ಜನ ನೀರಿಗಾಗಿ ಪರದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏಳು ಕೋಟಿ ಏಳು ಕೋಟಿ ಯಾರ ಜೇಬಿಗೆ ಹೋಯಿತು. ಮೇಯರ್, ಘನ ಸರಕಾರ, ಪ್ರಹ್ಲಾದ ಜೋಶಿ ಇದಕ್ಕೆ ಉತ್ತರ ಕೋಡ್ತಾರಾ ಎಂದು ಕಿಡಿಕಾರಿದರು.

ಸರಕಾರ ಮಲಗಿಕೊಂಡಿದೆ‌. ಅದನ್ನು ಎಚ್ಚರಿಸುವ ಕೆಲಸ ಜನತೆ ಮಾಡಬೇಕು ಎಂದು ದೀಪಕ ಚಿಂಚೋರೆ ಚಾಟಿ ಬೀಸಿದರು.

ಸುದ್ದಿಗೋಷ್ಠಿಯಲ್ಲಿ
ವಸಂತ ಅರ್ಕಾಚಾರ, ಸತೀಶ ತುರಮುರಿ, ಶಾಂತಾಕ್ಕ ಗುಜ್ಜಳ,
ಮಹಾನಗರ ಪಾಲಿಕೆ ಸದಸ್ಯ ಶಂಕರ ಹೊಸಮನಿ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *