ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮೂರು ಜನ ಸಾವಿನ ಕದ ಬಡಿದಿದ್ದಾರೆ.
ಮತ್ತೆ ಹೊಸದಾಗಿ 308 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 6824ಕ್ಕೆ ಏರಿಕೆಯಾಗಿದೆ.
308 ಸೋಂಕಿತರಲ್ಲಿ, 208 ಜನ ಹೊರರಾಜ್ಯದಿಂದಲೇ ಬಂದವರಿಗೆ ಆಗಿದ್ದಾರೆ. 25 ಜನಅಂತರ್ ರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.
ಇಂದು ರಾಜ್ಯದಲ್ಲಿ209 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 3648 ಜನ ಗುಣಮುಖರಾಗಿದ್ದು, 3092 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15 ಜನ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಶನಿವಾರವೂ ಎಳು ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 81ಕ್ಕೆ ಬಂದು ನಿಂತಿದೆ.
ಗುರುವಾರ ಪತ್ತೆಯಾದ 271 ಪ್ರಕರಣಗಳಲ್ಲಿ ಕಲಬುರಗಿಯಲ್ಲಿ ಒಂದೇ ದಿನ 67 ಪ್ರಕರಣ ಪತ್ತೆಯಾಗಿದ್ದು, ಯಾದಗಿರಿ 52, ಬೀದರ 42, ಬೆಂಗಳೂರು 31, ದಕ್ಷಿಣ ಕನ್ನಡ 30, ಧಾರವಾಡದಲ್ಲಿ 20 ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.
ಇನ್ನೂಳಿದಂತೆ ಉಡುಪಿ 14, ಹಾಸನ ಹಾಗೂ ಬಳ್ಳಾರಿ ತಲಾ 11, ವಿಜಯಪುರ 6, ರಾಯಚೂರು ಹಾಗೂ ಉತ್ತರ ಕನ್ನಡ ತಲಾ 5, ಕೋಲಾರ 4, ದಾವಣಗೆರೆ 3, ಮಂಡ್ಯ ಹಾಗೂ ಹಾವೇರಿಯಲ್ಲಿ ತಲಾ 2, ಮೈಸೂರು, ಬಾಗಲಕೋಟೆ ಹಾಗೂ ರಾಮನಗರದಲ್ಲಿ ತಲಾ ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಾವಿನ ರಣಕೇಕೆ ರಾಜ್ಯದಲ್ಲಿ ಶನಿವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದಾರೆ.
ಪಿ-6375 ನೇ ಸೋಂಕಿತ 23 ವರ್ಷದ ಯುವಕ, ಪಿ-6557 ನೇ ಸೋಂಕಿತ 62 ವರ್ಷದ ವೃದ್ದ ಧಾರವಾಡದಲ್ಲಿ ಪಿ-6258 ನೇ 70 ವರ್ಷದ ಸೋಂಕಿತ ವ್ಯಕ್ತಿ ಒಂದು ಒಟ್ಟು ಮೂರು ಜನ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ.