ನೂರರ ಅಜ್ಜನ ರೋಗ ನಿರೋಧಕ ಶಕ್ತಿ
ಗಜೇಂದ್ರಗಡದ ಸ್ವಾತಂತ್ಯ್ರ ಹೋರಾಟಗಾರ
ಶಾಸಕ ಕಳಕಪ್ಸ ಬಂಡಿ ಸನ್ಮಾನ
ಗಜೇಂದ್ರಗಡ : ಸ್ವಾತಂತ್ಯ್ರ ಹೋರಾಟಗಾರ, ಶತಾಯುಷಿ, ಪಟ್ಟಣದ ನಿವಾಸಿ, ವೆಂಕೂಸಾ ಭಾಂಡಗೆಯವರು ಕರೊನಾ ಗೆದ್ದು ಗಮನ ಸೆಳೆದಿದ್ದಾರೆ.
ಅವರ ರೋಗ ನಿರೋಧಕ ಶಕ್ತಿ, ಆತ್ಮವಿಶ್ವಾಸ ಕೂಡ ಅವರನ್ನು ಈ ಸೋಂಕು ಸೋಲಿಸಿ ಹೊರಬರಲು ಕಾರಣವಾಗಿದೆ.
ಅವರು ಗುಣಮುಖರಾಗಿದ್ದಕ್ಕೆ ರೋಣ ಶಾಸಕ ಕಳಕಪ್ಪ ಬಂಡಿ ಬುಧವಾರ ಅವರನ್ನು ಭೇಟಿ ಮಾಡಿ ಸನ್ಮಾನಿಸಿ, ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಶೋಕ ವನ್ನಾಲ, ದತ್ತು ಭಾಕಳೆ, ರವಿಂದ್ರ ಶಿಂಗ್ರಿ, ಆನಂದ ಭಾಂಡಗೆ ಇದ್ದರು.