ಅಪರಾಧ

ಬೈಕ್-ಕಾರಿನ ಮಧ್ಯೆ ಡಿಕ್ಕಿ : ಅಪಘಾತದಲ್ಲಿ ಬೈಕ್ ಸವಾರನಿಗೆ ಗಾಯ

ಧಾರವಾಡ Prajakiran.com : ಬೈಕ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಧಾರವಾಡ ಎಸ್ಪಿ ಕಚೇರಿಯ ಎದುರು ಗುರುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರನಿಗೆ ಗಾಯವಾಗಿದ್ದು ಸ್ಥಳಿಯ ವಾಹನ ಸವಾರರು ಗಾಯಗೊಂಡ ಬೈಕ್ ಸವಾರನನ್ನು ಅಂಬುಲೆನ್ಸ್ ಸಹಾಯ ಪಡೆದು ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು. ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿ ಮುಂದಿನ ಕ್ರಮ ಜರುಗಿಸಿದರು. Share on: WhatsApp

ಅಪರಾಧ

ಯರಗಟ್ಟಿಯಲ್ಲಿ ಕಿಸೆ ಕಳ್ಳನಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು…!

ವರದಿ : ಪ್ರಶಾಂತ ಹೂಗಾರ. ಯರಗಟ್ಟಿ prajakiran.com : ಕಿಸೆ ಕಳ್ಳನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆಯೊಂದು ಸ್ಥಳೀಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಶನಿವಾರ ಧಾರವಾಡದಿಂದ ಯರಗಟ್ಟಿ ಮಾರ್ಗವಾಗಿ ತೇರದಾಳಗೆ ಹೋಗುವ ಬಸ್ಸಿನಲ್ಲಿ ಜನರು ಹತ್ತಿ ಇಳಿಯುವ ವೇಳೆ ಹಲವಾರು ಜನರ ಕಿಸೆ ಕತ್ತರಿಸಿ ಸಾವಿರಾರು ಹಣವನ್ನು ದೋಚಿಕೊಂಡು ಓಡಿ ಹೋಗುತ್ತಿದ್ದ ಸಂದರ್ಭದಲ್ಲಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಸಾರ್ವಜನಿಕರು ಈ ಕೀಸೆ ಕಳ್ಳನಿಗೆ ಧರ್ಮದೇಟು ನೀಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು […]

ಅಪರಾಧ

ನಿಯಂತ್ರಣ ತಪ್ಪಿ ರಸ್ತೆಬದಿ ಹಳ್ಳಕ್ಕೆ ಬಿದ್ದ ಬೈಕ್ ; ಸ್ಥಳದಲ್ಲೇ ಇಬ್ಬರ ಸಾವು…!

ಬಿಳಿಗಿರಿ ಶ್ರೀನಿವಾಸ ಚಾಮರಾಜನಗರ prajakiran.com : ತ್ರಿಬಲ್ ರೈಡಿಂಗ್, ಮಾಡುವಾಗ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿ ಹಳ್ಳಕ್ಕೆ ಬಿದ್ದ ಘಟನೆ ಚಾಮರಾಜನಗರ ತಾಲ್ಲೂಕು ಅರಕಲವಾಡಿ ಬಳಿ ನಡೆದಿದೆ‌. ತಮಿಳುನಾಡು ಮೂಲದ ಕುಮಾರ್(44), ಚಾಮರಾಜನಗರ ತಾಲ್ಲೂಕು ಮೂಡಲ ಹೊಸಹಳ್ಳಿಯ ಬಸವಯ್ಯ(63) ಸಾವನ್ನಪ್ಪಿದ್ದಾರೆ. ಇದೇ ವೇಳೆ ಮೂಡಲ ಹೊಸಹಳ್ಳಿ ಯ ಮಹಾದೇವಯ್ಯ ಎಂಬುವರು ಗಂಭೀರ ವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಂದೇ ಬೈಕ್ ನಲ್ಲಿ ಮೂವರು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ಕುರಿತು ಚಾಮರಾಜನಗರ ಗ್ರಾಮಾಂತರ […]

ಅಪರಾಧ

ಧಾರವಾಡದಲ್ಲಿ ಎರಡು ಕಾರುಗಳ ಮಧ್ಯೆ ಡಿಕ್ಕಿ….!

ಧಾರವಾಡ prajakiran.com : ಎರಡು ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಧಾರವಾಡದ ದಾಸನಕೋಪ್ಪ ಸರ್ಕಲ್ ಬಳಿ ನಡೆದಿದೆ. ಈ ಘಟನೆಯಿಂದ ಕೆಲ ಕಾಲ ಸ್ಥಳದಲ್ಲಿ ಸಂಚಾರ ಅಸ್ತವ್ಯಸ್ತ ಗೊಂಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಧಾರವಾಡ ಸಂಚಾರಿ ಪೊಲೀಸರು ವಾಹನ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಪಘಾತದಿಂದ ಕಾರು ಜಖಂಗೊಂಡಿದ್ದು ಧಾರವಾಡ ಸಂಚಾರಿ ಪೊಲೀಸ್  ಪರಿಶೀಲನೆ ನಡೆಸಿ, ಮುಂದಿನ ಕ್ರಮ ಜರುಗಿಸಿದರು. Share on: WhatsApp

ಅಪರಾಧ

ಧಾರವಾಡದಲ್ಲಿ ಟ್ರಕ್ ಟೈರ್ ಬ್ಲಾಸ್ಟ್ : ಮತ್ತೊಂದು ಟ್ರಕ್ ಗೆ ಡಿಕ್ಕಿ

ಧಾರವಾಡ prajakiran.com : ಗೂಡ್ಸ್ ತುಂಬಿಕೊಂಡು ಹೊರಟಿದ್ದ ಟ್ರಕ್ ಒಂದರ ಟೈರ್ ಬ್ಲಾಸ್ಟ್ ಆಗಿ ಇನ್ನೊಂದು ಟ್ರಕ್ ಗೆ ಡಿಕ್ಕಿ ಹೊಡೆದ ಘಟನೆ ಧಾರವಾಡ ಬೈಪಾಸ್ ಬಳಿಯ ಕೆಲಗೇರಿ ಟೋಲ್ ಗೇಟ್ ಬಳಿ ಸಂಭವಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಇನ್ನೂ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಧಾರವಾಡ ಸಂಚಾರಿ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕಿದರು‌ ಕೆಲಗೇರಿ ರಸ್ತೆಯ ಟೋಲ್ ಗೇಟ್ ಬಳಿ ನಡೆದ ಈ ಘಟನೆಯಿಂದ ಬೈಪಾಸ್ […]

ಅಪರಾಧ

ಧಾರವಾಡದ ಎಸ್ ಡಿ ಎಂ ಆಸ್ಪತ್ರೆ ಬಳಿ ಸರಣಿ ಅಪಘಾತ

ಧಾರವಾಡ prajakiran.com : ಧಾರವಾಡದ ಎಸ್ ಡಿ ಎಂ ಆಸ್ಪತ್ರೆ ಬಳಿ ಗೂಡ್ಸ್ ವಾಹನ ಸೇರಿ ಎರಡು ಕಾರುಗಳ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿದ ಘಟನೆ ಶುಕ್ರವಾರ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಆದರೆ ಕಾರು ಹಾಗೂ ಗೂಡ್ಸ್ ವಾಹನ ಜಖಂಗೊಂಡಿವೆ. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ದೌಡಾಯಿಸಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಘಟನೆ ಕುರಿತು ಮಾಹಿತಿ ಕಲೆ ಹಾಕಿ, ಮುಂದಿನ ಕ್ರಮ […]

ಅಪರಾಧ

ಧಾರವಾಡದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಧಾರವಾಡ prajakiran.com : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಸೋಮಶೇಖರ @ ಶಾಂತರಾಮ ತಂದೆ ವಸಂತ ತೊಡಕರ (40) ಸಾಃ ತೇಜಸ್ವಿನಗರ ಉರ್ದು ಶಾಲೆ ಹತ್ತಿರ ಧಾರವಾಡ ಎಂದು ಗುರುತಿಸಲಾಗಿದೆ. ಇವನ ತಾಬಾದಿಂದ ಸುಮಾರು 890 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗೀರ ಮಾಡಿ ಆರೋಪಿತನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೆ, ಈ ಕುರಿತು ತನಿಖೆ ಮುಂದುವರೆದಿದೆ. ಹುಬ್ಬಳ್ಳಿ – ಧಾರವಾಡ […]

ಅಪರಾಧ

ಧಾರವಾಡದಲ್ಲಿ ಕಂಬಕ್ಕೆ ಬೈಕ್ ಗುದ್ದಿ ಯುವಕ ಸಾವು…!

ಧಾರವಾಡ Prajakiran.com : ಬೈಕ್ ಸ್ಕಿಡ್ ಆದ ಪರಿಣಾಮ ಬೈಕ್ ಸವಾರ ಕೆಇಬಿ ಕಂಬಕ್ಕೆ ಗುದ್ದಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಭಾರತಿ ನಗರದಲ್ಲಿ  ಈ ರ್ದುಘಟನೆ ನಡೆದಿದ್ದು,ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಏಕಾ ಏಕಿ ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ಕೆಇಬಿ ಕಂಬಕ್ಕೆ ಗುದ್ದಿ ಕೆಳಗೆ ಬಿದ್ದು ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಧಾರವಾಡ ಸಂಚಾರಿ ಪೊಲೀಸರು ಗಾಯಗೊಂಡ ವ್ಯಕ್ತಿಯನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ […]

ಅಪರಾಧ

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ : ತಾಯಿಯಿಂದ ಪೊಲೀಸರಿಗೆ ದೂರು….!

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ವರದಿ : ಪ್ರಶಾಂತ ಹೂಗಾರ ಬೆಳಗಾವಿ prajakiran.com : ಪಾಪಿ ತಂದೆ ಮಗಳ ಮೇಲೆ ಅತ್ಯಾಚಾರ ನಡೆಸಿದ ಘಟನೆಯೊಂದು ಶುಕ್ರವಾರ ಬೆಳಕಿಗೆ ಬಂದಿದೆ. ತಾಲೂಕಿನ ಸಾಂಬ್ರಾ ದಲ್ಲಿ ಈ ಘಟನೆ ನಡೆದಿದ್ದು ತಾಯಿಯೆ ಪೋಲಿಸರಿಗೆ ದೂರನ್ನು ನೀಡಿದ್ದಾಳೆ ಮಾದಿಹಾಳ ಪೋಲಿಸರ ಮಾಹಿತಿ ಪ್ರಕಾರ ಮಾರ್ಚ 24‌ ರ ಮಧ್ಯಾಹ್ನ ಮೂರು ಗಂಟೆಗೆ 50 ವರ್ಷದ ವ್ಯಕ್ತಿಯೊಬ್ಬ ತನ್ನ 16 ವರ್ಷ ಮಗಳನ್ನು ಪಕ್ಕಕ್ಕೆ ಕರೆದು ಅಶ್ಲೀಲವಾಗಿ ವರ್ತಿಸಿ ಅತ್ಯಾಚಾರ ನಡೆಸಿದ್ದಾನೆ. ತಾಯಿ […]

ಅಪರಾಧ

ಧಾರವಾಡದಲ್ಲಿ ಹೈ ಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ‌ ದಾಳಿ….!

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ದೊಡ್ಡ ಹೈ ಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆ ಮೇಲೆ‌ ದಾಳಿ ನಡೆಸಿ, ಒಂಬತ್ತು ಜನರಿಗೆ ಖೆಡ್ಡಾ ತೋಡಿದ್ದಾರೆ. ಐವರು ಯುವಕರು, ನಾಲ್ವರು ಯುವತಿಯರ ಬಂಧನ ಮಾಡಿರುವ ಪೊಲೀಸರು ಅವರನ್ನು ಧಾರವಾಡದ ಉಪನಗರ ಠಾಣೆಗೆ ಕರೆತಂದಿದ್ದಾರೆ. ಬಂಧಿತರನ್ನು ನೇಪಾಳ ಮೂಲದ ಯುವತಿಯರು ಎಂದು ಗುರುತಿಸಲಾಗಿದ್ದು, ಅವರು ವೇಶ್ಯಾವಾಟಿಕೆ ಸಂಬಂಧ ಧಾರವಾಡದಲ್ಲಿ ನೆಲೆಸಿದ್ದರು ಎಂದು ಪೊಲೀಸ್ ಮೂಲಗಳು ಪ್ರಜಾಕಿರಣ.ಕಾಮ್ ಗೆ ತಿಳಿಸಿವೆ. Share on: WhatsApp