ಧಾರವಾಡ prajakiran.com : ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಕೋಮು ಪ್ರಚೋದನೆ ಹೇಳಿಕೆ ಕೊಟ್ಟಿರುವ ಶಾಸಕ ಜಮೀರ್ ಅಹ್ಮದ್ ವಿರುದ್ಧ ಕೂಡಾ ಸರ್ಕಾರ ದೂರು ದಾಖಲಿಸಬೇಕೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಮೈದಾನ ಕಂದಾಯ ಇಲಾಖೆಯದ್ದು ಎಂದು ಘೋಷಣೆ ಮಾಡಿದೆ.
ಆದರೆ ಅಲ್ಲಿಯ ಶಾಸಕ ಈದ್ಗಾ ಮೈದಾನದಲ್ಲಿ ಯಾವುದೇ ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದು ಕೋಮು ಪ್ರಚೋದನೆ, ಅಶಾಂತಿಗೆ ಕಾರಣವಾಗುವ ಹೇಳಿಕೆ ಕೊಟ್ಟಿದ್ದಾರೆ.
ಇಷ್ಟಾದರೂ ಸರ್ಕಾರ ಶಾಸಕರ ವಿರುದ್ಧ ಯಾವುದೇ ಕ್ರಮವಹಿಸಿಲ್ಲ. ಕೋಮು ಪ್ರಚೋದನೆ ದೂರು ದಾಖಲು ಮಾಡಲಿಲ್ಲ. ಆದರೆ ಯಶೋ ಭಾರತಿ ಸಂಸ್ಥೆಯ ಮುಖ್ಯಸ್ಥ ಭಾಸ್ಕರ ಅವರು ಕೋಮು ಪ್ರಚೋದನೆ ನೀಡಿದ್ದಾರೆಂದು ಅವರ ಮೇಲೆ ದೂರು ದಾಖಲು ಮಾಡಿದ್ದಾರೆ. ಇದು ಸರ್ಕಾರ ತಾರತಮ್ಯ ನೀತಿಯಾಗಿದೆ ಎಂದು ಅಸಮಾಧಾನಗೊಂಡರು.
ರಾಜ್ಯ ಸರ್ಕಾರ ಕೇವಲ ಹಿಂದೂಗಳನ್ನು ಮಾತ್ರ ಟಾರ್ಗೆಟ್ ಮಾಡತ್ತಾ ಇದೆ. ಹಿಂದೂಗಳ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತಿದೆ. ಈ ಕಾರಣಕ್ಕೆ ರಾಜ್ಯದ ಬಿಜೆಪಿ ಸರ್ಕಾರದ ಮೇಲೆ ಹಿಂದೂಗಳು ಸಿಟ್ಟಾಗಿದ್ದಾರೆ.
ಬಿಜೆಪಿಯ ನಿಲುವಿನಿಂದಲೇ ಬಿಜೆಪಿಯ ಕಾರ್ಯಕರ್ತರೇ ಪಕ್ಷದ ವಿರುದ್ಧ ಮುಗಿಬಿದ್ದಿದ್ದಾರೆ. ಕೂಡಲೇ ಸರ್ಕಾರ ಕೋಮು ಗಲಭೆಗೆ ಕಾರಣವಾಗುವ ಹೇಳಿಕೆ ನೀಡಿರುವ ಶಾಸಕ ಜಮೀರ್ ಅಹಮ್ಮದ್ ಹಾಗೂ ಅಬ್ದುಲ್ ರಜಾಕ್ ಅವರ ಮೇಲೆ ಕೇಸ್ ದಾಖಲಾಗಬೇಕು ಎಂದು ಒತ್ತಾಯ ಮಾಡಿದರು.
ಹಿಂದೂಗಳ ಮತ ಪಡೆದು ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು ಹಿಂದೂಗಳ ಮೇಲೆ ಕೇಸ್ ಹಾಕುತ್ತಿದ್ದಾರೆ. ಬಿಜೆಪಿಯವರೇ ನಿರ್ಲಕ್ಷ್ಯ, ನೀಚ್ ಕೆಲಸ ಮಾಡಬೇಡಿ. ಯಾಕೆ ಹಿಂದೂಗಳನ್ನು ಟಾರ್ಗೆಟ್ ಮಾಡತ್ತಾ ಇದ್ದೀರಿ. ಜಮೀರ ಅಹ್ಮದ್ ಅವರನ್ನು ಬಚಾವ್ ಮಾಡತ್ತೀರಿ,
ಸರ್ಕಾರದ ಭೂಮಿ ಎಂದರೆ ಅಲ್ಲಿ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ಹಕ್ಕುಭಾದ್ಯತೆಯಾಗಿದೆ. ಶಾಸಕ ಜಮೀರ್ ಅಹ್ಮದ್, ಅಬ್ದುಲ್ ರಜಾಕ್ ಅವರಿಗೆ ಯಾವುದೇ ಹಕ್ಕಿಲ್ಲ.
ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಬೇಕು. ರಾಷ್ಟ್ರಧ್ವಜ ಘೋಷಣೆ ಮೊಳಗಬೇಕು. ಈ ಪ್ರಕರಣದಲ್ಲಿ ತಕ್ಷಣ ಸರ್ಕಾರ ತಿರ್ಮಾನ ಮಾಡಬೇಕು. ಕೂಡಲೇ ಸರ್ಕಾರ ಭಾಸ್ಕರ ಮೇಲಿನ ದೂರು ವಾಪಾಸ್ ತೆಗೆದುಕೊಳ್ಳಬೇಕು. ಇಲ್ಲವಾದರೇ ಆಂದೋಲನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.