ಮಂಡ್ಯ prajakiran. com, ಆಗಸ್ಟ್ 11: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಬಂಧಿತರೆಲ್ಲರೂ ಪ್ರಮುಖ ಆರೋಪಿಗಳು. ಅವರ ತೀವ್ರ ವಿಚಾರಣೆಯಾಗುತ್ತಿದೆ. ಅದರ ಹಿಂದಿರುವ ದೊಡ್ಡ ಷಡ್ಯಂತರದ ಬಗ್ಗೆಯೂ ವಿಚಾರಣೆಯಾಗುತ್ತಿದೆ.
ಈ ಎಲ್ಲಾ ಮಾಹಿತಿಯನ್ನು ಎನ್.ಐ.ಎ ಗೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳೂ ತಿಳಿಸಿದರು.