ಹುಬ್ಬಳ್ಳಿ prajakiran.
.com : ಗೆಳೆಯರೊಂದಿಗೆ ಮಲಪ್ರಭಾ ಕಾಲುವೆಯಲ್ಲಿ ಈಜಾಡಲು ಹೋಗಿದ್ದ ಯುವಕನೊಬ್ಬ ನೀರಿನ ಸೆಳುವಿಗೆ ಸಿಲುಕಿದ ಘಟನೆ ತಾಲ್ಲೂಕಿನ ಆಯಟ್ಟಿ ಗ್ರಾಮದ ಬಳಿ ಸಂಭವಿಸಿದೆ.
ಧಾರವಾಡ ತಾಲ್ಲೂಕಿನ ಹಾರೋಬೆಳವಡಿ ಗ್ರಾಮದ ನಾಲ್ವರು ಯುವಕರು ಮಂಗಳವಾರ ಮಧ್ಯಾಹ್ನ ಈಜಾಡಲು ಬಂದಾಗ ಈ ಘಟನೆ ನಡೆದಿದೆ.
ಅದರಲ್ಲಿ ಒಬ್ಬ ಯುವಕ ನೀರಿನ ಸೆಳುವಿಗೆ ಸಿಲುಕಿ ತೇಲಿ ಹೋಗಿದ್ದಾನೆ.
ಹಾರೋಬೆಳವಡಿಯ ನಾಲ್ವರು ಯುವಕರಲ್ಲಿ ವೀರಯ್ಯ ಚನ್ನವೀರಯ್ಯ ಸಿದ್ದಗಿರಿಮಠ (19) ಎಂಬಾತ ಮಾತ್ರ ತೇಲಿ ಹೋಗಿದ್ದಾನೆ.
ಸ್ಥಳದಲ್ಲಿಯೇ ಇದ್ದ ಗ್ರಾಮಸ್ಥರು ಈಜಾಡುತ್ತಿದ್ದ ಸ್ಥಳದಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ನವಲಗುಂದ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಪಿ.ಎಸ್.ಐ ಜಯಪಾಲ ಪಾಟೀಲ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ತನಿಖೆ ಮುಂದುವರೆದಿದೆ.