ನಾಳೆ ರಾತ್ರಿಯಿಂದ ಮತ್ತಷ್ಟು ಕಠಿಣ ಕ್ರಮ
ಬೆಂಗಳೂರು prajakiran.com : ರಾಜ್ಯದಲ್ಲಿನ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಬರುವ ಶುಕ್ರವಾರ ಜ. 6 ರಿಂದ ರಾಜ್ಯಾದ್ಯಂತ ಎರಡು ವಾರ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ಅವರು ಮುಖ್ಯಮಂತ್ರಿ ಹಾಗೂ ತಜ್ಞರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಆಹಾರ,ವಸ್ತು, ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು. ಹೋಟೆಲ್ ಪಾರ್ಸಲ್ ಇರುತ್ತದೆ.
ಈಗಾಗಲೇ ಇರುವ ರಾತ್ರಿ ಕರ್ಪ್ಯೂ ಮತ್ತೆ ಎರಡು ವಾರಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು.
ನಾಳೆ ರಾತ್ರಿಯಿಂದ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿನಿಮಾ ಮಂದಿರ, ಮಾಲ್ 200 ಸೀಟ್ಸ್ , ಧಾರ್ಮಿಕ ಕ್ಷೇತ್ರದಲ್ಲಿ ಕೂಡ ಶೇಕಡ 50 ರಷ್ಟು ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ.
ಧರಣಿ, ರ್ಯಾಲಿ, ಪ್ರತಿಭಟನೆ, ಜಾತ್ರೆ, ಜನಜಂಗುಳಿಗೆ ನಿರ್ಭಂದ ವಿಧಿಸಲಾಗಿದೆ.
ಬೆಂಗಳೂರಿನಲ್ಲಿ ಮಾತ್ರ ಸಂಪೂರ್ಣವಾಗಿ
ಶಾಲೆ ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಬಸ್, ರೈಲಿನಲ್ಲಿ ಪ್ರಯಾಣ ಕೂಡ ನಿರ್ಭಂದ ಹೇರಲಾಗಿದೆ ಎಂದು ವಿವರಿಸಿದರು.