ಬೆಂಗಳೂರು Prajakiran.com : ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಚಾರ ಹೆಚ್ಚಾಗಿದೆ. ಬಿಜೆಪಿ ಹಾಗು ಮೋದಿ ಮೇಲೆ ನಂಬಿಕೆ ಹೋಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಅರುಣ್ ಸಿಂಗ್ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ಜೊತೆ ಮಾತಾಡಿದ್ದೇನೆ.
ಮೈತ್ರಿ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡಿ ಬಂದಿದ್ದೇವೆ. ನಾನು ಯಾವುದೇ ಬಣದಲ್ಲೂ ಇಲ್ಲ.
ನಾನೊಬ್ಬ ಬಿಜೆಪಿ ಕಾರ್ಯಕರ್ತ. ಪಕ್ಷದ ಹಿತದೃಷ್ಟಿಯಿಂದ ಕೆಲವೊಂದು ಮಾತುಗಳನ್ನು ಹೇಳಿದ್ದೇವೆ.
ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಶಕ್ತಿ ಸಿಎಂಗೆ ಈಗ ಇಲ್ಲ. ಯಡಿಯೂರಪ್ಪಗೆ ವಯಸ್ಸಾಗಿದೆ, ಸಿಎಂ ಬದಲಾವಣೆ ಮಾಡಬೇಕು.
ಆ ಸ್ಥಾನಕ್ಕೆ ಪಂಚಮಸಾಲಿ ಲಿಂಗಾಯುತ ನಾಯಕರಿಗೆ ಸಿಎಂ ಸ್ಥಾನ ಕೊಡಲಿ. ಯಾವ ಮಠಾಧಿಪತಿಗಳು ಬಸವ ತತ್ವ ಮೀರಿ ಹೋಗಬಾರದು.
ಬಿಜೆಪಿಗೆ ಎಲ್ಲ ಜಾತಿ- ಧರ್ಮದವರು ಮತ ಹಾಕಿದ್ದರೆ. ಕೇವಲ ಲಿಂಗಾಯುತ ಸಮುದಾಯ ಮತ ಹಾಕಿಲ್ಲ, ಪಂಚಮಸಾಲಿ ಸಮುದಾಯವರು ಸಿಎಂ ಮಾಡಲಿ.
ಪಂಚಮಸಾಲಿಯಲ್ಲಿ ಮುರುಗೇಶ್ ನಿರಾಣಿ, ಬಸನಗೌಡ ಯತ್ನಾಳ್, ಅರವಿಂದ ಬೆಲ್ಲಾದ ಇದ್ದಾರೆ ಎಂದು ವಿಶ್ವನಾಥ್ ಹೇಳಿದರು.