ಧಾರವಾಡ prajakiran.com :
ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧನಕ್ಕೆ ಒಳಗಾಗಿ ಬೆಳಗಾವಿಯ ಹಿಂಡಲಗಾ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಧಾರವಾಡಕ್ಕೆ ಆಗಮಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಧಾರವಾಡದ ಮಿನಿವಿಧಾನಸೌಧಕ್ಕೆ ಬಂದು ಅಲ್ಲಿ ಧಾರವಾಡ ಉಪನೋಂದಣಿ ( ಸಬ್ ರಿಜಿಸ್ಟರ್ ) ಕಚೇರಿಗೆ ತೆರಳಿ ಅಲ್ಲಿ ತಮ್ಮ ಪತ್ನಿ ಶಿವಲೀಲಾ ಕುಲಕರ್ಣಿಗೆ ಜಿಪಿಎ ಬರೆದುಕೊಟ್ಟರು.
ಅಲ್ಲಿಂದ ಧಾರವಾಡದ ಹಳೆಯ ಡಿಎಸ್ಪಿ ಕಚೇರಿ ಬಳಿಯ ಬ್ಯಾಂಕ್ ಆಫ್ ಇಂಡಿಯಾಗೆ ತೆರಳಿ ಪತ್ನಿ ಶಿವಲೀಲಾ ಕುಲಕರ್ಣಿ ಜೊತೆಗೆ ವಿನಯ ಡೇರಿ ವ್ಯವಹಾರ ನಡೆಸಲು ಜಂಟಿ ಖಾತೆಯನ್ನು ತೆರದರು.
ಎರಡು ಕಡೆ ನೂರಾರು ಜನ
ವಿನಯ ಕುಲಕರ್ಣಿ ಬೆಂಬಲಿಗರು ಜಮಾಯಿಸಿದ್ದರು.
ಜನರತ್ತ ಕೈ ಬೀಸಿ, ಎಲ್ಲರಿಗೂ ಕೈ ಮುಗಿದು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೇ ನಿರ್ಗಮಿಸಿದರು.
ಇದಕ್ಕೆ ಕಳೆದ ತಿಂಗಳು ಕೋರ್ಟ್ ಜಿಪಿಎ ನೀಡಲು ಅನುಮತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು