ಧಾರವಾಡ prajakiran.com : ತಮ್ಮ ಸರಳತೆ ಹಾಗೂ ಸೇವಾ ದಕ್ಷತೆ ಮೂಲಕ ವಿದ್ಯಾನಗರಿ ಧಾರವಾಡದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿರುವ ಧಾರವಾಡ ಎಸಿಪಿ ಅನುಷಾ ಜಿ. ಅವರು ರಕ್ಷಾ ಬಂಧನದ ಹಿನ್ನಲೆಯಲ್ಲಿ ಭಾನುವಾರ ಹಲವಾರು ಪೊಲೀಸರಿಗೆ ರಾಖಿ ಕಟ್ಟಿ ಅವರ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದರು.
ಧಾರವಾಡ ಶಹರದ ಸಹಾಯಕ ಪೊಲೀಸ ಆಯುಕ್ತರಾಗಿರುವ ಅನುಷಾ ಅವರು ಧಾರವಾಡದ ಎಲ್ಲಾ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಕ್ಷಾ ಬಂಧನದ ನಿಮಿತ್ತ ಸಹೋದರಿಯಾಗಿ ರಾಕಿ ಕಟ್ಟಿ ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಹಬ್ಬಕ್ಕೆ ಹೊಸ ಮೆರಗು ಕೊಟ್ಟಿದ್ದಾರೆ.
ಆ ಮೂಲಕ ಸಹೋದರ-ಸಹೋದರಿಯರ ಬಾಂಧವ್ಯಕ್ಕೆ ಹೊಸ ಮುನ್ನುಡಿಯನ್ನು ಬರೆದಿರುವ ಅವರ ಈ ಶುಭ ಹಾರೈಕೆ ಕರೋನಾ ಸಂಕಷ್ಟದ ನಡುವೆಯೂ ಎದೆಗುಂದದೆ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ಪೊಲೀಸರ ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.