ಧಾರವಾಡ Prajakiran.com : ವಿಕೃತ ಮನಸ್ಸಿನ ವಿದೇಶಿ ಸಂಸ್ಕೃತಿ ವ್ಯಾಲೆಂಟೈನ್ಸ್ ಡೇ ಆಚರಣೆಗೆ ಶ್ರೀ ರಾಮ ಸೇನೆ ಧಾರವಾಡ ವತಿಯಿಂದ ನಗರದ ದುರ್ಗಾ ದೇವಿ ದೇವಸ್ಥಾನದಲ್ಲಿ ಹಿರಿಯರ ಪಾದ ಪೂಜೆ ಮೂಲಕ ಪ್ರೀತಿ ದಿನಕ್ಕೆ ವಿರೋಧ ವ್ಯಕ್ತಪಡಿಸಲಾಯಿತು.
ಧಾರವಾಡ ದುರ್ಗಾ ದೇವಿ ದೇವಸ್ಥಾನದಲ್ಲಿ ಹಿರಿಯರ ಪಾದ ಪೂಜೆ ಸಲ್ಲಿಸಿ ನಮನ ಸಲ್ಲಿಸಿ ಹೂಮಳೆ ಮೂಲಕ ಹಿರಿಯರ ಆಶೀರ್ವಾದವನ್ನು ಶ್ರೀ ರಾಮ ಸೇನೆ ಕಾರ್ಯಕರ್ತರು ಪಡೆದರು.
ನಂತರ ನಗರದ ಕೆಸಿ ಪಾರ್ಕ್, ಸಾಧನಕೇರಿ ಪಾರ್ಕ್ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಲೆಂಟೈನ್ಸ್ ಡೇ ಕರಪತ್ರ ಹಂಚಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಮುಖಂಡರಾದ ಮಂಜು ಕಾಟಕರ್, ಮಹಾಲಿಂಗ ಅಗಳಿ, ಅಣ್ಣಪ್ಪ ದೇವಟಗಿ, ರಾಜು ಗಾಡಗೋಳಿ, ವಿಜಯ ದೇವರಮನಿ, ಬುದ್ಧು ಪಾಟೀಲ್, ಮೈಲಾರ ಗುಡ್ಡಪ್ಪನವರ, ರಾಮದಾಸ್ ದವಳಿ , ವಿಶ್ವಾಸ ಸೇರಿದಂತೆ ಶ್ರೀ ರಾಮ ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು.