ವರದಿ : ಪ್ರಶಾಂತ ಹೂಗಾರ
ರಾಮದುರ್ಗ prajakiran.com : ರಾಮದುರ್ಗದ ಹೊರವಲಯದಲ್ಲಿ ಪೊಲೀಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಯುವಕರಿಬ್ಬರು ಸಮೀಪದ ಮಲ್ಲಪ್ರಭಾ ನದಿಗೆ ಹಾರಿ ನೀರುಪಾಲಾದ ದುರ್ಘಟನೆ ರವಿವಾರ ಸಂಭವಿಸಿದೆ.
ನಗರದ ನಿವಾಸಿಗಳಾದ ಮಂಜು ಬಂಡಿವಡ್ಡರ(30) ಹಾಗೂ ಸಮೀರ ಬಟಕುರ್ಕಿ(22) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ನಗರದ ಹತ್ತಿರ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಪೊಲೀಸರು ಏಕಾಏಕಿ ದಾಳಿ ನಡೆಸಿದ ವೇಳೆ ಯುವಕರು ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳುಲು ನದಿಗೆ ಹಾರಿದ್ದಾರೆ.
ಒಟ್ಟು ಆರು ಜನರ ಪೈಕಿ 4 ಜನ ಈಜಿ ದಡ ಸೇರಿದರೆ 2 (ಇಬ್ಬರು) ಯುವಕರು ನೀರಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಸೋಮವಾರ ಸಂಜೆ ಹೊತ್ತಿಗೆ ಇಬ್ಬರು ಯುವಕರ ಮೃತದೇಹಗಳನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹೊರಕ್ಕೆ ತೆಗೆದಿದ್ದಾರೆ.
ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.