ಧಾರವಾಡ prajakiran.com : ನಗರದಲ್ಲಿ ಸುರಿದ ಮಳೆಯಿಂದ ಮರವೊಂದು ಆಟೋ ಮೇಲೆ ಉರುಳಿದ ಘಟನೆ ಧಾರವಾಡದ ಸಿಬಿಟಿ ಬಳಿ ನಡೆದಿದೆ..
ಮುಂಜಾನೆಯಿಂದ ಸುರಿದ ಮಳೆಯಿಂದ ಮರ ಧರೆಗೆ ಉರುಳಿದೆ. ಇದರಿಂದ ನೂರ ಅಹ್ಮದ್ ಮಾಗಡಿ ಎಂಬುವವರು ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.
ಆದರೆ ಆಟೋ ರಿಕ್ಷಾ ಸಂಪೂರ್ಣವಾಗಿ ಜಖಂಗೊಂಡಿರುವುದರಿಂದ ಆಟೋ ಚಾಲಕ ದಿಕ್ಕು ತೋಚದೆ ಕಂಗಲಾಗಿದ್ದಾನೆ.
ಕೆಎ 25 ಸಿ 9100 ನಂಬರಿನ ರಿಕ್ಷಾ ಜಖಂಗೊಂಡಿದ್ದು, ಚಾಲಕನಿಗೆ ಕೆಲ ಸಣ್ಣಪುಟ್ಟ ಗಾಯಗಳಾಗಿವೆ. ಇದ್ದಕ್ಕಿದ್ದಂತೆ ಮರ ಉರುಳಿ ಬಿದ್ದಿದ್ದರಿಂದ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.