ಹಳಿ ತಪ್ಪಿದ ರೈಲು, ಯಾವುದೇ ಹಾನಿ ಸಂಭವಿಸಿಲ್ಲ
ಮುಂಬೈ prajakiran.com : ಹತ್ರಸ್ ನಿಜಾಮುದ್ದೀನ್ ಕಡೆಯಿಂದ ಗೋವಾ ಕಡೆ ತೆರಳುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ ರೈಲು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸುರಂಗ ಮಾರ್ಗದಲ್ಲಿ ಹಳಿ ತಪ್ಪಿದೆ.
ಈ ಘಟನೆ ಶನಿವಾರ ಮುಂಜಾನೆ ನಡೆದಿದ್ದು, ಇದು ಮುಂಬೈಯಿಂದ 325 ಕೀ.ಮೀ. ದೂರದಲ್ಲಿರುವ ಕರ್ಬುಡೆ ಸುರಂಗದಲ್ಲಿ ನಡೆದಿದೆ. ಆದರೆ ಎಲ್ಲಾ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ದೊಡ್ಡ ಕಲ್ಲು ಬಂಡೆಯೊಂದು ಹಳಿಯ ಮೇಲೆ ಬಿದ್ದಿದ್ದರಿಂದ ರೈಲಿನ ಮುಂದಿನ ಚಕ್ರ ಹಳಿ ತಪ್ಪಿತು ಎಂದು ಕೊಂಕಣ ರೈಲ್ವೆ ಮಾಹಿತಿ ನೀಡಿದೆ.
ಮಾರ್ಗ ತೆರುವುಗೊಳಿಸಲು ಘಟನಾ ಸ್ಥಳಕ್ಕೆ ರೈಲ್ವೆ ನಿರ್ವಹಣಾ ವಾಹನ ಮತ್ತು ಕೊಂಕಣ ರೈಲ್ವೆ ಅಧಿಕಾರಿಗಳು ಧಾವಿಸಿದ್ದಾರೆ. ತೆರವು ಕಾರ್ಯ ಮುಂದುವರೆದಿದೆ.