ಧಾರವಾಡ prajakiran.com : ಆಸ್ತಿಗಾಗಿ ಚಿಕ್ಕಪ್ಪನಿಗೆ ತಲ್ವಾರ್ ಬೀಸಿದ ಘಟನೆ ಗುರುವಾರ ರಾತ್ರಿ ಧಾರವಾಡದ ಸೈದಾಪುರ ಸಮೀಪದ ಡುಮ್ಮಗೇರಿ ಓಣಿಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಪೊಲೀಸರು ಆರೋಪಿ ವಾಸೀಂ ಶಿವಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಈತನ ಮೇಲೆ (307) ಕೊಲೆಗೆ ಯತ್ನ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.
ಈತ ಆಸ್ತಿಗಾಗಿ ಚಿಕ್ಕಪ್ಪನಾದ ಯಾಕೂಬ ಶಿವಳ್ಳಿ ಮೇಲೆ ತಲ್ವಾರ್ ಬೀಸಿದ್ದ.
ಕಳೆದ ಹಲವು ದಿನಗಳಿಂದ ಇಬ್ಬರ ನಡುವೆ ಆಸ್ತಿ ವಿವಾದ ಉಂಟಾಗಿತ್ತು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು ಎಂದು ಗೊತ್ತಾಗಿದೆ.
ನಿನ್ನೇ ರಾತ್ರಿ ಏಕಾಎಕಿ ತಲ್ವಾರ್ ತೆಗೆದುಕೊಂಡು ಬಂದವನೇ ಮುಗಿ ಬಿದ್ದಿದ್ದಾನೆ.
ಇದರಿಂದಾಗಿ ಯಾಕೂಬ್ ಶಿವಳ್ಳಿ ಗಂಭೀರವಾಗಿ ಗಾಯಗೊಂಡಿದ್ದು , ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕರೋನಾ ಕಠಿಣ ಲಾಕ್ ಡೌನ್ ಸಂದರ್ಭದಲ್ಲಿ ಧಾರವಾಡದ ಸೈದಾಪುರದಲ್ಲಿ ತಲ್ವಾರ್ ಬೀಸಿದ ಸುದ್ದಿ ಹರಡಿದ್ದರಿಂದ ಜನತೆ ಕೆಲ ಕಾಲ ಗಲಿಬಿಲಿಗೊಂಡಿದ್ದರು.
ನಂತರ ಮಾಹಿತಿ ಅರಿತು ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.