ಪ್ರಜಾಕಿರಣ Big Exclusive ಧಾರವಾಡ prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನ ನೂರಾರು ಪೊಲೀಸರಿಗೆ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೋನಾ ಭಾನುವಾರ ವಿದ್ಯಾನಗರಿ ಧಾರವಾಡದ ಪೊಲೀಸಗೂ ವಕ್ಕರಿಸಿದೆ. ಧಾರವಾಡದ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಗೆ ಕರೊನಾ ಪಾಸಿಟಿವ್ ಇರುವುದು ಪ್ರಜಾಕಿರಣ.ಕಾಮ್ ಗೆ ದೃಢ ಪಟ್ಟಿದೆ. ಇವರು ಕಳೆದ ಹಲವು ದಿನಗಳ ಹಿಂದೆ ಧಾರವಾಡದಿಂದ ಗೋಕರ್ಣಕ್ಕೆ ತೆರಳಿ, ಅಲ್ಲಿಯ ತೀರ್ಥಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲಿಂದ ಬಂದ ನಂತರ ಅವರಿಗೆ ನೆಗಡಿ, ಜ್ವರದ ಲಕ್ಷಣಗಳು […]