ಬೆಂಗಳೂರು prajakiran.com : ನಾಡಿನ ಹಿರಿಯ ನಟ ಹಾಗೂ ಹಲವು ದಶಕಗಳ ಕಾಲ ಪತ್ರಕರ್ತನಾಗಿ ತಮ್ಮದೆ ಆದ ವಿಶಿಷ್ಠವಾದ ಛಾಪು ಮೂಡಿಸಿದ್ದ ಸುರೇಶ್ಚಂದ್ರ ಲಿಂಗೇನಹಳ್ಳಿ ವಿಧಿವಶರಾದರು.
ಅವರು ಕಳೆದ ೧೫ ದಿನಗಳ ಹಿಂದೆ ಕರೋನಾ ಪಾಸಿಟಿವ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಿಸದೆ ಇಂದು ಇಹಲೋಕ ತ್ಯಜಿಸಿದರು.
ಅವರು ಚೆಲುವಿನ ಚಿತ್ತಾರ ಸೇರಿದಂತೆ ಹತ್ತು ಹಲವು ಸಿನಿಮಾಗಳಲ್ಲಿ ಪೋಷಕ ನಟ, ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದರು.
ನಟನೆ ಜೊತೆಗೆ ಪತ್ರಿಕೆಯಲ್ಲೂ ಸೇವೆ ಸಲ್ಲಿಸುತ್ತಿದ್ದ ಸುರೇಶ್ಚಂದ್ರ ಅವರನ್ನು
ಅಂತ್ಯಕ್ರಿಯೆಯನ್ನು ಮಧುಗಿರಿಯ ಲಿಂಗೇನಹಳ್ಳಿಯಲ್ಲಿ ಮಾಡಲು ಕುಟುಂಬದವರು ನಿರ್ಧಾರ ಕೈಗೊಂಡಿದ್ದಾರೆ.