ಬೆಂಗಳೂರು Prajakiran.com : ನಟ ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನ ಪ್ರಕರಣದ ಕುರಿತಾಗಿ ನಿನ್ನೆ ತಾನೆ ಚಾಲೆಂಜಿಗ್ ಸ್ಟಾರ್ ದರ್ಶನ್ ಸುದ್ದಿ ಗೋಷ್ಠಿ ನಡೆಸಿ ಈ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದರು
ಇದರ ಬೆನ್ನಲ್ಲೆ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ತನಿಖೆ ನಡೆದು ಆರೋಪ ಸಾಬೀತಾಗಲಿ ಎಂದು ಹೇಳಿದ್ದಾರೆ.
ಈ ಪ್ರಕರಣದ ಕುರಿತು ಇಂದು ಬೆಂಗಳೂರಿನಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಉಮಾಪತಿ, ನನ್ನ ಹೆಸರನ್ನು ಹಾಳು ಮಾಡುವುದಕ್ಕೆ ಹೀಗೆ ಮಾಡಲಾಗಿದೆ.
ಅರುಣಾಕುಮಾರಿ ಆರೋಪಿ ಸ್ಥಾನದಲ್ಲಿದ್ದಾರೆ. ಸರಿಯಾಗಿ ತನಿಖೆ ನಡೆದು ಆರೋಪ ಸಾಬೀತಾಗಲಿ ಎಂದು ಹೇಳಿದ್ದಾರೆ.
ಅರುಣಾಕುಮಾರಿಗೆ ಯಾರೋ ಹೇಳಿಕೊಡುತ್ತಿದ್ದಾರೆ. ಹೀಗಾಗಿ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ.
ಪೋಲೀಸರ ರೀತಿಯಲ್ಲಿ ಕೇಳಿದರೆ ಇದರ ಸತ್ಯ ಹೋರಬೀಳಲಿದೆ. ದರ್ಶನ್ ಮತ್ತು ನನ್ನ ಸ್ನೇಹವನ್ನು ಹಾಳು ಮಾಡುವುದಕ್ಕೆ ಹೀಗೆ ಮಾಡಲಾಗಿದೆ ಎಂದರು.