ನವದೆಹಲಿ prajakiran.com : ಮಾನಸಿಕ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿದಿದ್ದ ಎನ್ನಲಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಪ್ರಕರಣದ ಸಿಬಿಐ ತನಿಖೆಗೆ ಕೊನೆಗೂ ಸುಪ್ರೀಂಕೋರ್ಟ್ ಗ್ರಿನ್ ಸಿಗ್ನಲ್ ನೀಡಿದೆ.
ಈ ಪ್ರಕರಣದ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ನಟಿ ರಿಯಾ ಚಕ್ರವರ್ತಿ ಹಾಗೂ ಮುಂಬೈ ಪೊಲೀಸರು ಅಭಿಪ್ರಾಯಪಟ್ಟಿದ್ದರು.
ಆದರೆ ಬಿಹಾರದ ಜೆಡಿಯು ನೇತೃತ್ವದ ನಿತೀಶಕುಮಾರ್ ಸರಕಾರ ಅವರ ಪೋಷಕರ ಮನವಿ ಹಾಗೂ ಸುಶಾಂತ್ ಸಿಂಗ್ ರಜಪೂತ ಅಭಿಮಾನಿಗಳ ಒತ್ತಡಕ್ಕೆ ಮಣಿದು ಸಿಬಿಐ ಹೆಗಲಿಗೆ ಒಪ್ಪಿಸಿ, ಆದೇಶ ಹೊರಡಿಸಿದ್ದರು.
ಆಗ ಬಿಹಾರದಿಂದ ತನಿಖೆಗೆ ಬಂದಿದ್ದ ಐಪಿಎಸ್ ಅಧಿಕಾರಿಗಳಿಗೆ ಕೋವಿಡ್ -19 ನಿಯಮಾವಳಿ ಪ್ರಕಾರ 14 ದಿನಗಳ ಕ್ವಾರಂಟಿನ್ ಸೀಲ್ ಹಾಕಿ ಮುಂಬೈ ಮಹಾನಗರ ಪಾಲಿಕೆ ಹಾಗೂ ಮುಂಬೈ ಪೊಲೀಸರು ಯಡವಟ್ಟು ಮಾಡಿದ್ದರು.
ಅಲ್ಲದೆ, ಇದನ್ನು ಪ್ರಶ್ನಿಸಿ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದರು. ಇದೀಗ ಸುಪ್ರೀಂಕೋರ್ಟ್ ಸಿಬಿಐ ವಿಚಾರಣೆಗೆ ಸಮ್ಮತಿ ನೀಡಿರುವುದು ಅವರಿಗೆ ಸಂಕಷ್ಟ ಎದುರಾದಂತಾಗಿದೆ.